ನಮಸ್ಕಾರ ರೈತರೇ, ಎಷ್ಟೋ ಜನ ರೈತರಿಗೆ ತಮ್ಮ ಕೃಷಿ ಜಮೀನಿನ ಪಹಣಿ/ಆರ್ ಟಿ ಸಿ/ಉತಾರಿ ಗಳಲ್ಲಿ ಬೆಳೆ ನಮೂದು ಮಾಡುವುದು ಹೇಗೆ ಎಂದು ಗೊತ್ತಿರುವುದಿಲ್ಲ. ಹಾಗೂ ಈ ಮುಂಚೆ ಗ್ರಾಮ ಮಟ್ಟದ ಗ್ರಾಮ ಲೆಕ್ಕಾಧಿಕಾರಿ/ತಲಾಟಿ ಗಳಲ್ಲಿ ಬೆಳೆ ದೃಡೀಕರಣ ಪಡೆದುಕೊಳ್ಳಬಹುದಿತ್ತು. ಆದರೆ ಅದು ಈಗ ಉಪಯೋಗಕ್ಕೆ ಬರುವುದಿಲ್ಲ.
ಏಕೆಂದರೆ ರಾಜ್ಯ ಸರಕಾರವು ಪಹಣಿ/ಆರ್ ಟಿ ಸಿ/ಉತಾರಿ ಗಳಲ್ಲಿ ಬೆಳೆ ನಮೂದು ಮಾಡಲು ಬೆಳೆ ಸಮೀಕ್ಷೆ ಆ್ಯಪ್ ಎಂಬ ತಂತ್ರಾಂಶವನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ನಮೂದು ಮಾಡಿದರೆ ಮಾತ್ರ ಪಹಣಿ/ಆರ್ ಟಿ ಸಿ/ಉತಾರಿ ಗಳಲ್ಲಿ ಬೆಳೆ ನಮೂದು ಬರುತ್ತದೆ.
ರಾಜ್ಯ ಸರಕಾರವು 2017 ರಿಂದ ರೈತರಿಗೆ ಅನುಕೂಲವಾಗಲೆಂದು ಬೆಳೆ ಸಮೀಕ್ಷೆ ಆ್ಯಪ್ ಬಿಡುಗಡೆ ಮಾಡಿದ್ದು, ಈ ಒಂದು ತಂತ್ರಾಂಶದ ಮೂಲಕ ನಿಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ನಮೂದು ಮಾಡಬಹುದು. ನಂತರ ಆ ಮಾಹಿತಿ ನಿಮ್ಮ ಪಹಣಿ/ಆರ್ ಟಿ ಸಿ/ಉತಾರಿ ಗಳಲ್ಲಿ ನಮೂದಾಗಿ ಬರುತ್ತದೆ.
ಬೆಳೆ ಸಮೀಕ್ಷೆ ಆ್ಯಪ್ ಬಗ್ಗೆ ಮಾಹಿತಿಗಾಗಿ ರೈತರು ಹತ್ತಿರದ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ, ರೇಷ್ಮೆ ಇಲಾಖೆಗಳನ್ನು ಭೇಟಿ ಮಾಡಿದರೆ ಅಲ್ಲಿರುವ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.
ಇದನ್ನೂ ಓದಿ:ತೋಟಗಾರಿಕೆ ಇಲಾಖೆಯಿಂದ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ!
ರಾಜ್ಯದಲ್ಲಿ ಬೆಳೆ ಸಮೀಕ್ಷೆಯನ್ನು 3 ಮೂರು ಬಾರಿ ಮಾಡಲಾಗುತ್ತದೆ. ಮುಂಗಾರು, ಹಿಂಗಾರು. ಬೇಸಿಗೆ ಎಂದು. ಮುಂಗಾರು ಬೆಳೆ ಸಮೀಕ್ಷೆಯನ್ನು ಇಡಿ ರಾಜ್ಯದಲ್ಲೇ ಪ್ರತಿಯೊಂದು ಗ್ರಾಮದಲ್ಲಿ ಸಮೀಕ್ಷೆ ಕೈಗೊಳ್ಳಲಾಗುತ್ತದೆ. ಬೇಸಿಗೆ ಸಮೀಕ್ಷೆಯನ್ನು ಯಾವ ಜಿಲ್ಲೆಗಳಲ್ಲಿ ರಭಿಬೆಳೆ(ಹಿಂಗಾರು ಬೇಸಾಯ) ದ ಬೆಳೆಗಳನ್ನು ಬೆಳೆಯುತ್ತಾರೆ ಆ ಜಿಲ್ಲೆಗಳಲ್ಲಿ ಮಾತ್ರ ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತದೆ. ಅದೇ ರೀತಿ ಬೇಸಿಗೆ ಬೆಳೆಯನ್ನು ಯಾವ ಜಿಲ್ಲೆಗಳಲ್ಲಿ ಮಾತ್ರ ಬೆಳೆಯಲಾಗುತ್ತದೆ ಆ ಜಿಲ್ಲೆಗಳಲ್ಲಿ ಮಾತ್ರ ಬೇಸಿಗೆ ಬೆಳೆ ಸಮೀಕ್ಷೆ ಕಾರ್ಯ ನಡೆಸಲಾಗುತ್ತದೆ.
ಬೆಳೆ ಸಮೀಕ್ಷೆ ಮಾಡುವ ಸಮಯ:
ಮುಂಗಾರು ಬೆಳೆ ಸಮೀಕ್ಷೆ-ಜೂನ್ ನಿಂದ ಅಕ್ಟೋಬರ್ ವರೆಗೆ
ಹಿಂಗಾರು ಬೆಳೆ ಸಮೀಕ್ಷೆ-ನವೆಂಬರ್ ನಿಂದ ಫೆಬ್ರುವರಿ
ಬೇಸಿಗೆ ಬೆಳೆ ಸಮೀಕ್ಷೆ- ಮಾರ್ಚ್ ನಿಂದ ಮೇ ಮೊದಲ ವಾರದ ವರೆಗೆ
ಇದನ್ನೂ ಓದಿ:ಕಿಸಾನ್ ಯೋಜನೆಯ ಹಣದ ಕಂತುಗಳನ್ನು ನೋಡುವ ವಿಧಾನ!
ಪಹಣಿ/ಆರ್ ಟಿ ಸಿ/ಉತಾರಿ ಗಳಲ್ಲಿ ಬೆಳೆ ನಮೂದು ಮಾಡುವ ವಿಧಾನ ತಿಳಿಯಲು ಈ ಲಿಂಕ್ ಒತ್ತಿ. Click here…
ಹೆಚ್ಚಿನ ಮಾಹಿತಿಗಾಗಿ: ನಿಮ್ಮ ಹತ್ತಿರದ ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ.