ನಮಸ್ಕಾರ ರೈತರೇ, ಕೇಂದ್ರ ಸರಕಾರದ ಕಿಸಾನ್ ಸಮ್ಮಾನ್ ನೀದಿ ಯೋಜನೆಯು 2019 ರಿಂದ ಚಾಲನೆ ಗೊಂಡಿದ್ದು ಇಲ್ಲಿಯವರೆಗೂ 19 ಕಂತುಗಳು ರೂಪದಲ್ಲಿ ರೂ.2000 ಹಣವನ್ನು ರೈತರ ಖಾತೆಗೆ ನೇರ ಜಮೆ ಮಾಡಲಾಗಿದೆ. ನಿಮ್ಮ ಖಾತೆಗೆ ಎಷ್ಟು ಹಣ ಜಮೆ ಆಗಿದೇ ತಿಳಿಯಲು ಈ ಲೇಕನವನ್ನು ನೋಡಿ.
ಹೌದು ರೈತರೇ, ಕೇಂದ್ರ ಸರಕಾರದ ವಾರ್ಷಿಕ ರೂ.6000 ಹಣವನ್ನು ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪ್ರತಿಯೊಬ್ಬ ರೈತರ ಖಾತೆಗೆ ಮೂರು ಹಂತ ಮತ್ತು ಮೂರು ಕಂತುಗಳಲ್ಲಿ ಜಮೆ ಮಾಡಲಾಗುತ್ತಿದೆ.
ಕೇಂದ್ರ ಸರಕಾರವು ನೀಡುವ ಈ ಹಣವು ಸಣ್ಣ ಮತ್ತು ಅತೀ ಸಣ್ನ ರೈತರಿಗೆ ಕೃಷಿಗೆ ಬೇಕಾಗುವ ಸಲಕರಣೆಗಳು ಮತ್ತು ರಸಗೊಬ್ಬರಗಳನ್ನು ಖರೀದಿ ಮಾಡಲು ಸಹಕಾರಿಯಾಗಲಿದೆ.
ಇದನ್ನೂ ಓದಿ:ಮಣ್ಣು ಪರೀಕ್ಷೆ ಮಾಡಿಸುವ ವಿಧಾನ ಮತ್ತು ಎಲ್ಲಿ ಮಾಡಿಸಬೇಕು!
ಹಣ ಜಮೆ ಕುರಿತು ತಿಳಿದುಕೊಳ್ಳುವ ವಿಧಾನ:
ರೈತರಿಗೆ ಪಿ ಎಂ ಕಿಸಾನ ಯೋಜನೆಯ ಹಣವು ಯಾವ ಬ್ಯಾಂಕ್ ಗೆ ಜಮೆಯಾಗಿದೆ ಯಾವ ದಿನಾಂಕ ಜಮೆಯಾಗಿದೆ ಎಂದು ತಿಳಿಯಲು ಇಲ್ಲಿದೆ ಮಾಹಿತಿ. ಕೆಲವು ಜನಕ್ಕೆ ಹಣ ಜಮೆಯಾಗಿದ್ದರು ಅದು ಅವರ ಗಮನಕ್ಕೆ ಬಂದಿರುವುದಿಲ್ಲ.
ಮೊದಲಿಗೆ ಇಲ್ಲಿ ಪಿಎಮ್ ಕಿಸಾನ್(PM Kisan samman) ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ಕೇಂದ್ರ ಸರಕಾರದ ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಪೋರ್ಟಲ್ ತೆರದುಕೊಳ್ಳುತ್ತದೆ.
ವಿಧಾನ-1: ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಪೋರ್ಟಲ್ ತೆರದುಕೊಂಡ ಮೇಲೆ Farmers Corner ನಲ್ಲಿ ಹಲವಾರು ಅಂಕಣಗಳಿವೆ E-kyc ಅಂಕನ,New farmer registration ಅಂಕಣ, Know your status ಅಂಕಣ, Beneficiary list ಅಂಕಣ,Name correction as per Aadhar ಅಂಕಣ ಹೀಗೆ ಹಲವಾರು ಅಂಕಣಗಳಿವೆ.
ಇದನ್ನೂ ಓದಿ: ಕೃಷಿ ಸಾಲ ಪಡೆಯಬೇಕೆ? ಈ ಕೆಲಸ ಕಡ್ಡಾಯ!
ವಿಧಾನ-2: ಈ ಎಲ್ಲಾ ಅಂಕಣಗಳಲ್ಲಿ ನೀವು Know your status ಮೇಲೆ ಕ್ಲಿಕ್ ಮಾಡಿ.
ವಿಧಾನ-3: ನಂತರ Know your Registration no. ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಿ ಅದಕ್ಕೆ OTP ಬರುತ್ತದೆ, OTP ಹಾಕಿ ನಿಮ್ಮ Registration number ತೆಗೆದುಕೊಳ್ಳಬೇಕು.
ವಿಧಾನ-4:ನಂತರ Know your status ಮೇಲೆ ಕ್ಲಿಕ್ ಮಾಡಿ ಅದರಲ್ಲಿ ನೀವು ಪಡೆದುಕೊಂಡ Registration number ಹಾಕಿ ಮತ್ತೆ ನಿಮ್ಮ ಮೊಬೈಲ್ ಗೆ OTP ಬರುತ್ತದೆ ಅದನ್ನು ಹಾಕಿದರೆ ನಿಮ್ಮ profile page ತೆರೆದುಕೊಳ್ಳುತ್ತದೆ. ಅದರಲ್ಲಿ ನಿಮ್ಮ ಹೆಸರು, ವಿಳಾಸ, ಹಾಗೂ ಇಲ್ಲಿಯವರೆಗೂ ಬಂದಿರುವ ಕಂತಿನ ಹಣದ ವಿವರ ಇರುತ್ತದೆ. ಒಂದು ವೇಳೆ ನಿಮಗೆ ಹಣ ಇನ್ನೂ ಜಮೆಯಾಗಿಲ್ಲವಾದರೆ ಹತ್ತಿರದ ಕೃಷಿ ಇಲಾಖೆಗೆ ಭೆಟಿ ಮಾಡಿ ವಿಚಾರಿಸಿ.
ಇಲ್ಲಿಯವರೆಗೂ ಎಷ್ಟು ಕಂತು ಹಣ ಬಂದಿದೆ ಎಂದು ನೋಡಲು ಇಲ್ಲಿದೆ ಲಿಂಕ್ CLICK HERE…