ನಮಸ್ಕಾರ ರೈತರೇ, ಕೇಂದ್ರ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ರೈತರ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 20ನೇ ಕಂತಿನ ಹಣವನ್ನು ನೇರ ರೈತರ ಖಾತೆಗೆ ಜಮೆ ಮಾಡಲು ಸರಕಾರದಿಂದ ಸಿದ್ಧತೆ ಮಾಡಿಕೊಳ್ಳಾಗುತ್ತಿದೆ. ಆದ್ದರಿಂದ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ಬಿಡುಗಡೆ ಪಟ್ಟಿಯಲ್ಲಿ ನಿಮ್ಮ ಹೆಸರು ಉಂಟೇ ಚೆಕ್ ಮಾಡಿಕೊಳ್ಳಿ.
ಕೇಂದ್ರ ಸರಕಾರದ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 19ನೇ ಕಂತನ್ನು ಈಗಾಗಲೇ ಫೆಬ್ರುವರಿ ತಿಂಗಳಿನಲ್ಲಿ ರೈತರ ಖಾತೆಗೆ ಜಮೆ ಮಾಡಲಾಗಿದೆ. ಇನ್ನೂ 20ನೇ ಕಂತಿನ ಬಿಡುಗಡೆ ಮಾಡಲು ಎಲ್ಲಾ ರೀತಿ ತಯಾರಿಗಳು ಕೃಷಿ ಇಲಾಖೆಯಿಂದ ನಡೆಯುತ್ತಿದ್ದು, ಎಲ್ಲಾ ರೈತರು ತಪ್ಪದೇ ನಿಮ್ಮ ಇಕೆವೈಸಿ(EKYC) ಮತ್ತು physical verification ಲಿಸ್ಟ್ ನಲ್ಲಿ ಹೆಸರು ಇರುವವರು ಮತ್ತು ಒಂದೇ ಕುಟುಂಬ ಪರಿಶೀಲನೆ ಬಾಕಿ ಮತ್ತು ಜಾಗದ ಪಹಣಿ/RTC ಪರಶೀಲನೆ ಬಾಕಿ ಇರುವವರು ಆದಷ್ಟು ಬೇಗನೆ ಹತ್ತಿರದ ಕೃಷಿ ಇಲಾಖೆ (ರೈತ ಸಂಪರ್ಕ ಕೇಂದ್ರ ) ಭೇಟಿ ಮಾಡಿ.
ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ವಾರ್ಷಿಕವಾಗಿ ರೂ.6000/ ಹಣ ವನ್ನು ಮೂರು ಕಂತುಗಳಲ್ಲಿ ನಾಲ್ಕು ತಿಂಗಳಿಗೆ ಒಮ್ಮೆ ನೇರ ರೈತರ ಖಾತೆಗೆ ಜಮೆ ಮಾಡಲಾಗುತ್ತದೆ. ಇದರ ಪ್ರಯೋಜನವನ್ನು ಎಲ್ಲಾ ಕೃಷಿ ರೈತರು ಪಡೆದುಕೊಳ್ಳಬಹುದು.
ಇದನ್ನೂ ಓದಿ:ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಕೃಷಿ ಇಲಾಖೆಯಿಂದ ರೂ.30,000 ಸಹಾಯಧನ ಪಡೆದುಕೊಳ್ಳಬಹುದು!
ಫಲಾನುಭವಿಗಳು ಈ ಕೆಲಸವನ್ನು ಕಡ್ಡಾಯವಾಗಿ ಮಾಡಿರಬೇಕು?
1)ಇಕೆವೈಸಿ(ekyc)
2)ಆಧಾರ್ ಬ್ಯಾಂಕ್ ಲಿಂಕ್
3)NPCI aadhar maping
4)ಒಂದೇ ಕುಟುಂಬ ಪರಿಶೀಲನೆ
5)PHYSICAL VERIFICATION ( ಕೃಷಿ ಸಖಿ OR VNOS ಬಳಿ)
Pmkisan ekyc checking-ಪಿಎಂ ಕಿಸಾನ್ ಇಕೆವೈಸಿ ಚೆಕ್ ಮಾಡುವ ವಿಧಾನ:
ಮೊದಲಿಗೆ ಇಲ್ಲಿ ನೀಡಲಾದ PM kisan.gov.in ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಪ್ರವೇಶ ಮಾಡಬೇಕು. ನಿಮಗೆ ಕೇಂದ್ರ ಸರಕಾರದ ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಪೋರ್ಟಲ್ ತೆರದುಕೊಳ್ಳುತ್ತದೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೃಷಿ ಇಲಾಖೆಯಲ್ಲಿ ಬಿತ್ತನೆ ಬೀಜ ವಿತರಣೆ ಆರಂಭ!
ವಿಧಾನ-1: ಪಿಎಮ್ ಕಿಸಾನ್ ಸಮ್ಮಾನ್ ನಿಧಿ ವೆಬ್ಸೈಟ್ ತೆರೆದುಕೊಂಡ ಮೇಲೆ Farmers Corner ನಲ್ಲಿ ಹಲವಾರು ಅಂಕಣಗಳಿವೆ E-kyc ಅಂಕಣ, New farmer registration ಅಂಕಣ, Know your status ಅಂಕಣ, Beneficiary list ಅಂಕಣ, Name correction as per Aadhar ಅಂಕಣ ಹೀಗೆ ಹಲವಾರು ಅಂಕಣಗಳಿವೆ.
ವಿಧಾನ-2: ಈ ಎಲ್ಲಾ ಅಂಕಣಗಳಲ್ಲಿ ನೀವು E-kyc ಅಂಕಣ ಮೇಲೆ ಕ್ಲಿಕ್ ಮಾಡಿ.
ವಿಧಾನ-3: ನಂತರ E-kyc ಅಂಕಣ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಆಧಾರ ನಂಬರ್ ಹಾಕಿ E-kyc ಆಗಿದಯೇ ಇಲ್ಲವೋ ಎಂದು ತಿಳಿದು ಕೊಳ್ಳಬಹುದು.