ಆತ್ಮೀಯ ರೈತ ಬಾಂದವರೇ, ಸಂಬಾರ ಪದಾರ್ಥಗಳ ಬಗ್ಗೆ ಭಾರತ ದೇಶದಲ್ಲಿ ಒಂದು ಇತಿಹಾಸನೇ ಇದೆ. ಹೌದು, ಆತ್ಮೀಯ ರೈತ ಮಿತ್ರರೇ,ಮಸಾಲೆ ಪದಾರ್ಥ ಎಂದರೇ ಮುಖ್ಯವಾಗಿ ನಾವು ಮಾಡುವ ಅಡುಗೆ ಬಹಳ ರುಚಿಕರವಾಗಿ ಮತ್ತು ಆರೋಗ್ಯಕರವಾದ ಸಿಹಿ ತಿನಿಸುಗಳು,ಮಿಠಾಯಿ,ಪಾನೀಯ ಹಾಗೂ ಮದ್ಯಗಳ ತಯಾರಿಕೆಯಲ್ಲಿ ಏಲಕ್ಕಿಯನ್ನು ಇತರೇ ಮಸಾಲೆ ಪದಾರ್ಥಗಳನ್ನು ನಾಲೆಗೆಗೆ ರುಚಿಕೊಡಲು,ಬಣ್ಣಕೊಡಲು,ಅಥವಾ ಸಂರಕ್ಷೀಸಲು ಸಹಿತ ಉಪಯೋಗಿಸಬಹುದು. ಸಂಬಾರ್ ಪದಾರ್ಥಗಳಲ್ಲಿ ಕೆಲವು ಸಸಿಗಳು ಔಷಧಿ ಗುಣಗಳನ್ನು ಒಳಗೊಂಡಿರುತ್ತವೆ.ಇಂತಹ ಸಸ್ಯಗಳನ್ನು ಮನೆಯಲ್ಲಿಯೇ ನಮ್ಮ ಗಾರ್ಡನ್ ಗಳಲ್ಲಿ ಮತ್ತು ನಮ್ಮ ತೋಟಪಟ್ಟಿಗಳಲ್ಲಿ ಬೆಳೆಸುವುದರಿಂದ ಹಲವಾರು ರೀತಿಯ ಉಪಯೋಗಗಳಿವೆ.
ಇದನ್ನೂ ಓದಿ: ಕೃಷಿ ಇಲಾಖೆ ವತಿಯಿಂದ ಹೈಟೆಕ್ ಹಾರ್ವೆಸ್ಟರ್ ಹಬ್ಗಳ ಸ್ಥಾಪನೆಗೆ ಸಹಾಯಧನ:
ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ ಭಾರತ ಸರ್ಕಾರ ಸಕಲೇಶಪುರ ಸಂಬಾರ ಮಂಡಳಿಯಿಂದ (Spices Board) ಏಲಕ್ಕಿ (Cardamom) ಹಾಗೂ ಕಾಳುಮೆಣಸು (Pepper)ಸಸಿಗಳ ಮಾರಾಟ ಮಾಡಲು ಪತ್ರಿಕೆ ಪ್ರಕಟಣೆ ಹೊರಡಿಸಿರುತ್ತದೆ. ಹೌದು ಆತ್ಮೀಯ ರೈತ ಮಿತ್ರರೇ ಭಾರತೀಯ ಸಂಬಾರ್ ಮಂಡಳಿಯು ಪ್ರತಿ ವರ್ಷವೂ ಉತ್ತಮ ಗುಣಮಟ್ಟದ ಹಾಗೂ ಅಧಿಕ ಇಳುವರಿ ಕೊಡುವ ಸಾಂಬಾರ ಸಸಿಗಳನ್ನೂ ಮಂಡಳಿಯ ಸಸ್ಯಪಾಲನ ಕೇಂದ್ರಗಳಿಂದ ಈ ಕೆಳೆಗೆ ನಮೂದಿಸಿರುವ ದರಗಳಲ್ಲಿ ಬೆಳೆಗಾರರಿಗೆ /ಸಂಘ/ಸಂಸ್ಥೆಸರ್ಕಾರಿ ಇಲಾಖೆಗಳಿಗೆ ಮರಾಟ ಮಾಡಲಾಗುವುದು.ಮೊದಲು ಬಂದವರಿಗೆ ಆದ್ಯತೆಯ ಮೇರೇಗೆ ಸಸಿಗಳನ್ನು ವಿತರಿಸಲಾಗುವುದು ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ ಭಾರತ ಸರ್ಕಾರ ಸಕಲೇಶಪುರ ಸಂಬಾರ ಮಂಡಳಿಯಿಂದ ಮಾಹಿತಿಯನ್ನು ಪತ್ರಿಕಾ ಪ್ರಕಟಣೆನ್ನು ನೀಡಿರುತ್ತದೆ.
ಆಸಕ್ತ ಬೆಳಗಾರರು ಹೆಚ್ಚಿನ ಮಾಹಿತಿಗಾಗಿ ತಮಗೆ ಹತ್ತಿರದ ಸಂಬಾರ ಮಂಡಳಿ ಸಸ್ಯಪಾಲನ ಕೇಂದ್ರಗಳನ್ನು ಸಂಪಕಿಸಿ ನಿಗದಿತ ದರದಲ್ಲಿ ಕೊಂಡುಕೊಳ್ಳಬಹುದಾಗಿದೆ.
ಕ್ರ ಸಂ | ಸಂಬಾರ ಸಸಿಗಳ ವಿವರ | ದರ |
1 | ಏಲಕ್ಕಿ ಸಸಿ (10 ತಿಂಗಳಿಂದ ಮೇಲ್ಪಟ್ಟು | 15ರೂ |
2 | ಕಾಳು ಮೆಣಸು (ಬೇರು ಭರಿಸಿದ ಪ್ರತಿ ಬಳ್ಳಿಗೆ) | 8 ರೂ |
3 | ಕಾಳು ಮೆಣಸು ನ್ಯೂಕ್ಲಿಯಸ್ ಸಸಿಗಳು | 20 ರೂ |
4 | ಲವಂಗ ಸಸಿ | 20 ರೂ |
5 | ಪುನಪುಳಿ ಸಸಿ | 10 ರೂ |
6 | ಉತ್ತಮ ತಳಿಯ ಏಲಕ್ಕಿ ಕಂದುಗಳು | 55 ರೂ |
1.ಸಸ್ಯಪಾಲನ ಕೇಂದ್ರ-ಬಿಳಗೆರಿ,ಮಡಿಕೇರಿ,ತಾ.ಕೊಡಗು ಜಿಲ್ಲೆ.
ಸಂಪರ್ಕಿಸಿ: ಶ್ರೀ.ರೆಜಿತ್ ಎನ್ ಪಿ- 9745295470
2.ಸಸ್ಯಪಾಲನ ಕೇಂದ್ರ -ಐಗೂರು ,ಸೋಮವಾರಪೇಟೆ ತಾ. ಕೊಡಗು ಜಿಲ್ಲೆ.
ಸಂಪರ್ಕಿಸಿ:ಶ್ರೀ. ರೆಜೆತ್ ಎನ್ ಪಿ-9745295470
ಇದನ್ನೂ ಓದಿ: Sheep and Goat farming training: ಉಚಿತ ಹೈಟೆಕ್ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ
3.ಸಸ್ಯಪಾಲನ ಕೇಂದ್ರ ಯಸಳೂರು, ಸಕಲೇಶಪುರ ತಾ. ಹಾಸನ ಜಿಲ್ಲೆ.
ಸಂಪರ್ಕಿಸಿ:ಶ್ರೀ ಬಿ.ಕೆ ರಮೇಶ -9480624895
4.ಸಸ್ಯಪಾಲನ ಕೇಂದ್ರ ಬೆಟ್ಟದಮನೆ, ಮೂಡಿಗೆರೆ ತಾ ಚಿಕ್ಕಮಗಳೂರು ಜಿಲ್ಲೆ
ಸಂಪರ್ಕಿಸಿ: ಶ್ರೀ. ಬೋಸ್ ಪಿ -8870620245
5.ಸಸ್ಯಪಾಲನ ಕೇಂದ್ರ ಬೆಳಗೋಳ ,ಕೊಪ್ಪತಾ ಚಿಕ್ಕಮಗಳೂರು ಜಿಲ್ಲೆ.
ಸಂಪರ್ಕಿಸಿ:ಶ್ರೀ ಸುನೀಲ್ ಕುಮಾರ್ ಜಿ-8921595371
ಇದನ್ನೂ ಓದಿ: ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಅತೀ ಮುಖ್ಯವಾದ ಪ್ರಕಟಣೆ !!!
ಆಸಕ್ತರು ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕಾಗಿ ತಿಳಿಸಿದೆ.
