Thursday, September 19, 2024

Horticulture Crop Parihara: ತೋಟಗಾರಿಕೆ ಬೆಳೆಗಳಿಗೆ ಹಾಗೂ ವಿವಿಧ ಬೆಳೆಗಳಿಗೆ ಪರಿಹಾರದ ಮೊತ್ತದ ವಿವರ:

ತೋಟಗಾರಿಕ ಬೆಳೆಗಳಿಗೆ ಎನ್.ಡಿ.ಆರ್.ಎಫ್/ ಎಸ್.ಡಿ.ಆರ್.ಎಫ್ ಮಾರ್ಗಸೂಚಿಗಳನ್ವಯ ಬೆಳೆ ನಷ್ಟಕ್ಕೆ ಪರಿಹಾರದ ಮೊತ್ತ ನಿಗದಿಪಡಿಸಿರುವುದಾಗಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ರವರು ಮಾಹಿತಿ ಹಂಚಿಕೊಂಡಿದ್ದು ಈ ಕುರಿತು ಸಂಪೂರ್ಣ ವಿವರ ಈ ಕೆಳಗೆ ಲೇಖನದಲ್ಲಿ ತಿಳಿಸಲಾಗಿದೆ.

14/02/2024 ರಂದು ನಡೆದ ವಿಧಾನ ಪರಿಷತ್ತಿನ ಕಲಾಪದ ವೇಳೆ ಸದಸ್ಯರಾದ ಟಿ.ಎ. ಶರವಣ ಅವರ ಚುಕ್ಕೆ ಗುರಿತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ತೀವ್ರ ಬರಗಾಲದಿಂದ 5,11,208 ಎಕರೆ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿರುವುದಾಗಿ ಅಂದಾಜಿಸಲಾಗಿದೆ.

ತೋಟಗಾರಿಕೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಸಹಯೋಗದೊಂದಿಗೆ ಸರ್ವೆ ಕಾರ್ಯ ನಡೆಸಿ ಒಟ್ಟು ಎಷ್ಟು ವಿಸ್ತೀರ್ಣದಲ್ಲಿ ಬೆಳೆ ಹಾನಿಯಾಗಿದೆ ಎಂದು ಜಂಟಿ ಸರ್ವೆ ಮೂಲಕ ಗುರುತಿಸಲಾಗಿದೆ.

ಇದನ್ನೂ ಓದಿ: PMKSY-OI Scheme: PVC Pipe ಮತ್ತು Diesel pumpset – ಶೇ. 50 ರ ಸಹಾಯಧನದಲ್ಲಿ ವಿತರಣೆ:

(NDRF)ಮತ್ತು (SDRF) ಮಾರ್ಗಸೂಚಿಗಳನ್ವಯ ಬೆಳೆ ನಷ್ಟಕ್ಕೆ ಪರಿಹಾರ! ವಿವರ:

ರಾಜ್ಯ ಮತ್ತು ದೇಶದಲ್ಲಿ ಯಾವುದೇ ಬಗ್ಗೆಯ ಮಾನವ ಮತ್ತು ಆಸ್ತಿ-ಪಾಸ್ತಿ ನಷ್ಟ ಸಂಭವಿಸಿದಾಗ ಸರಕಾರದಿಂದ ಅರ್ಹ ಫಲಾನುಭವಿಗಳಿಗೆ ಪರಿಹಾರವನ್ನು ನೀಡಲು ಈ (NDRF)ಮತ್ತು (SDRF) ಮಾರ್ಗಸೂಚಿಗಳನ್ವಯ ಬೆಳೆ ನಷ್ಟಕ್ಕೆ ಪರಿಹಾರ ಏಕ ರೂಪ ಮಾರ್ಗಸೂಚಿಯನ್ನು ಅನುಸರಿಸಲಾಗುತ್ತದೆ ಈ ಎನ್,ಡಿ ಅರ್‍,‌ಎಫ್. (NDRF- ರಾಷ್ಟ್ರೀಯ ವಿಪತ್ತು ನಿರ್ವಹಣೆ) ಈ ಮಾರ್ಗಸೂಚಿಯಲ್ಲಿ ಎಷ್ಟು ಪ್ರಮಾಣದ ಹಾನಿಗೆ ಎಷ್ಟು ಪರಿಹಾರವನ್ನು ಫಲಾನುಭವಿಗೆ ಪಾವತಿ ಮಾಡಬೇಕು ಎಂದು ಸಂಪೂರ್ಣವಾಗಿ ತಿಳಿಸಲಾಗಿರುತ್ತದೆ.

ಈ ಮಾರ್ಗಸೂಚಿಯ ನಿಯಮಗಳ ಪ್ರಕಾರವೇ ರಾಜ್ಯ ಸರಕಾರಗಳು ಕೇಂದ್ರದಿಂದ ಅನುದಾನ ಪಡೆದು ಇದಕ್ಕೆ ರಾಜ್ಯದ ಪಾಲನ್ನು ಸೇರಿಸಿ ಬೆಳೆ, ಅಸ್ತಿ-ಪಾಸ್ತಿ, ಮಾನವ ಹಾನಿಗೆ ಒಳಗಾದ ಫಲಾನುಭವಿಗಳಿಗೆ ಪರಿಹಾರವನ್ನು ನೀಡಬೇಕು.

ಅದರೆ ಕರ್ನಾಟಕ ರೈತರ ದುರದೃಷ್ಟವೋ ಅಥವಾ ಆಡಳಿತದಲ್ಲಿರುವ ಇಚ್ಚ ಶಕ್ತಿಯ ಕೊರತೆಯೋ? ಗೊತ್ತಿಲ್ಲ ಇದುವರೆಗೂ ಕೇಂದ್ರದಿಂದ ಬರ ಪರಿಹಾರದ ಮೊದಲ ಕಂತಿನ ಹಣ ಬಂದಿರುವುದಿಲ್ಲ ಈಗಾಗಲೇ ಅರ್ಥಿಕವಾಗಿ ಸಂಕಷ್ಟದಲ್ಲಿದ ರೈತರಿಗೆ ನೆರವಾಗಬೇಕಿದ ಸರಕಾರಗಳು ಅವರ ಮೇಲೆ ಇವರು ಇವರ ಮೇಲೆ ಅವರು ಆರೋಪಿಸುತ್ತ ರೈತರ ತಾಳ್ಮೆ ಪರೀಕ್ಷೆಯಲ್ಲಿ ತೂಡಗಿರುವುದು ದೊಡ್ಡ ದುರಂತ.

Horticulture crop parihara amount- ಎನ್.ಡಿ.ಆರ್‍.ಎಫ್/ಎಸ್.ಡಿ.ಆರ್‍.ಎಫ್ ಮಾರ್ಗಸೂಚಿಗಳನ್ವಯ ತೋಟಗಾರಿಕೆ ಬೆಳೆಗಳಿಗೆ ನಿಗದಿಪಡಿಸಿರುವ ಪರಿಹಾರದ ಮೊತ್ತದ ವಿವರ:

ಮಾರ್ಗಸೂಚಿಗಳನ್ವಯ ತೋಟಗಾರಿಕ ಬೆಳೆಗಳಿಗೆ ನಿಗದಿಪಡಿಸಿರುವ ಪರಿಹಾರದ ಮೊತ್ತದ ವಿವರ:

ಎನ್.ಡಿ.ಆರ್.ಎಫ್ / ಎಸ್.ಡಿ.ಆ‌ರ್.ಎಫ್ ಮಾರ್ಗಸೂಚಿಗಳನ್ವಯ ಪ್ರತಿ ಹೆಕ್ಟೇರ್ ಗೆ ಅಂದರೆ 2.5 ಎಕರೆಗೆ ತೋಟಗಾರಿಕೆ ಬೆಳೆ ನಷ್ಟಕ್ಕೆ ಮಳೆಯಾಶ್ರಿತ ಪ್ರದೇಶದ ಬೆಳೆಗಳಿಗೆ ರೂ. 8,500/- ನೀರಾವರಿ ಬೆಳೆಗಳಿಗೆ 17,000/- ಮತ್ತು ಬಹು ವಾರ್ಷಿಕ ಬೆಳೆಗಳಿಗೆ ರೂ. 22,500/- ಪರಿಹಾರ ನಿಗದಿಪಡಿಸಲಾಗಿದೆ ಎಂದು ತೋಟಗಾರಿಕ ಸಚಿವರ ಪರವಾಗಿ ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರು ಸದನಕ್ಕೆ ಮಾಹಿತಿ ತಿಳಿಸಿದರು.

ಇದನ್ನೂ ಓದಿ: RTC ಮೇಲೆ ಸಾಲ ಇದೆಯೇ ? ಹಾಗೂ ಯಾವ ಬೆಳೆ ನಮೂದಾಗಿದೆ ನಿಮ್ಮ ಮೊಬೈಲ್ ನಲ್ಲೆ ಪರೀಕ್ಷಿಸಿಕೊಳ್ಳಿ:

1st installment parihara amount- ಒಟ್ಟು 30.24,795 ರೈತರಿಗೆ ಮೊದಲ ಕಂತಿನ ಪರಿಹಾರದ ರೂ 2,000 ವರ್ಗಾವಣೆ:


ಕೃಷಿ, ರೇಷ್ಮೆ ಮತ್ತು ತೋಟಗಾರಿಕಾ ಬೆಳೆ ಸೇರಿದಂತೆ ನಷ್ಟದಿಂದ ನೊಂದ ಪ್ರತಿ ರೈತರಿಗೆ ರೂ. 2000ರಂತೆ ~ 30.24,795 ರೈತರಿಗೆ ರೂ. 573.28 ಕೋಟಿ ಪರಿಹಾರದ ಮೊತ್ತವನ್ನು ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಕೋಶದ ಮುಖಾಂತರ ವಿತರಿಸಲಾಗಿರುತ್ತದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಮಾಹಿತಿ ಹಂಚಿಕೊಂಡಿದ್ದಾರೆ.
ಬರ ಪರಿಹಾರವನ್ನು ಚೆಕ್ ಮಾಡಿಕೊಳ್ಳಲು ಇಲ್ಲಿ ಓತ್ತಿ

ಇತ್ತೀಚಿನ ಸುದ್ದಿಗಳು

Related Articles