Friday, September 20, 2024

ಭತ್ತದ ಹೊಸ ತಳಿ ಅಭಿವೃದ್ದಿ ಪಡಿಸಿದ ವಿಜ್ಞಾನಿಗಳು .ಯಾವ ತಳಿ ? ತಳಿಯ ಅವಧಿ ಎಷ್ಟು?ಹೆಕ್ಟರ್‍ ಗೆ ಇಳುವರಿ ಎಷ್ಟು? ಸಂಪೂರ್ಣ ಮಾಹಿತಿ ಈ ಅಂಕಣದಲ್ಲಿ.

ಆತ್ಮೀಯ ರೈತ ಬಾಂದವರೇ ಕೃಷಿಯಲ್ಲಿ ಹೆಚ್ಚಿನ ಆದಾಯ ಬರಲು ರೈತ ಸಮೂಹ ಪ್ರತಿ ವರ್ಷ ಒಳ್ಳೆಯ ತಳಿಗಳನ್ನೂ ಬಿತ್ತನೆಗೆ ಆಯ್ಕೆ ಮಾಡಿಕೊಳ್ಳುತ್ತಾರೆ, ಆದರೆ ರೈತ ಸಮೂಹ ಆದಾಯ ಹೆಚ್ಚಿಗೆ ಬರಬೇಕು ಅಂದರೆ ನಾವು ಇಳುವರಿ ಹೆಚ್ಚಿಗೆ ನೀಡುವ ತಳಿಯ ಜೊತೆಗೆ, ರೋಗ ನಿರೋಧಕ ತಳಿಗಳನ್ನೂ ಮತ್ತು ನಮ್ಮ ಹವಾಮಾನಕ್ಕೆ ಹೊಂದಿಕೊಳ್ಳುವ ತಳಿಗಳನ್ನು ಕೂಡಾ ಆಯ್ಕೆ ಮಾಡಿಕೊಳ್ಳಬೇಕಾಗಿರುತ್ತದೆ.
ಈ ಒಂದು ದೃಷ್ಠಿಯಲ್ಲಿ ಈ ಭತ್ತದ ತಳಿಯನ್ನು ಅಭಿವೃದ್ದಿ ಪಡಿಸಲಾಗಿರುತ್ತದೆ.

ನೆರೆ ಪರಿಸ್ಥಿತಿಯನ್ನು ತಾಳಿಕೊಳ್ಳಬಲ್ಲ ಹೊಸ ಭತ್ತದ ತಳಿಯನ್ನು ಪುದುಚೇರಿಯ ಕಾರೈಕಲ್‌ನಲ್ಲಿರುವ ಕೃಷಿ ಅಧ್ಯಯನ ಸಂಸ್ಥೆ ಅಭಿವೃದ್ಧಿಪಡಿಸಿದೆ. ಕೇಂದ್ರ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆಯ ನೆರವಿನೊಂದಿಗೆ ಹೊಸ ಭತ್ತದ ತಳಿಯನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿರುತ್ತಾರೆ.

ಇದನ್ನೂ ಓದಿ: ಕೃಷಿ ಸಂಬಂದಿಸಿದ ಉದ್ಯಮಕ್ಕೆ, ತರಬೇತಿ ಜೊತೆಗೆ ಆರ್ಥಿಕ ಸಹಾಯಧನ

ಪಂಡಿತ್ ಜವಾಹರಲಾಲ್ ನೆಹರು ಕೃಷಿ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಸಸ್ಯ ತಳಿ ಮತ್ತು ತಳಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಸ್.ತಿರುಮೇನಿ ಅವರ ನೇತೃತ್ವದ ಸಂಶೋಧಕರ ತಂಡವು ‘ಕೆಕೆಎಲ್ (ಆರ್)2’ ಎಂಬ ಹೆಸರಿನ ಭತ್ತದ ತಳಿಯನ್ನು ಅಭಿವೃದ್ಧಿಪಡಿಸಿರುತ್ತಾರೆ.

ಇದನ್ನೂ ಓದಿ: PM Kisan Samman Nidhi Yojane:ಹೊಸದಾಗಿ PM Kisan ಅರ್ಜಿ ಸಲ್ಲಿಸಲು ಅರ್ಜಿ ಆಹ್ವಾನ:

ಸಾಂಬಾ/ತಾಳಡಿ ಹಂಗಾಮಿನಲ್ಲಿ ಭತ್ತದ ಬೆಳೆ ಮಳೆಯಿಂದ ಹಾನಿಗೊಳಗಾಗುತ್ತದೆ. ನೀರಿನಲ್ಲಿ ಮುಳುಗಡೆಯಾಗಿ ಇಡೀ ಬೆಳೆ ನಾಶವಾಗುತ್ತದೆ. ಸದ್ಯ ಅಭಿವೃದ್ಧಿಯಾಗಿರುವ ಹೊಸ ತಳಿ, ನೆರೆ ಪರಿಸ್ಥಿತಿಯನ್ನು ಎದುರಿಸಿಯೂ ಉಳಿದುಕೊಳ್ಳುವ ಶಕ್ತಿ ಹೊಂದಿರಲಿದೆ.

ಭತ್ತದ ತಳಿಯ :


‘ಎಡಿಟಿ 46’ ಮತ್ತು ‘ಸ್ವರ್ಣ ಸಬ್ 1’ ತಳಿಯನ್ನು ‘ಮಾರ್ಕರ್ ಅಸಿಸ್ಟೆಡ್ ಬ್ಯಾಕ್‌ಕ್ರಾಸ್ ಮೆಥಡ್’ ಮೂಲಕ ಸಂಯೋಜಿಸಿ ‘ಕೆಕೆಎಲ್(ಆರ್)2’ ಹೊಸ ತಳಿಯನ್ನು ಅಭಿವೃದ್ಧಿಪಡಿಸಲಾಗಿದೆ ಡಾ. ಎಸ್. ತಿರುಮೇನಿ ತಿಳಿಸಿದ್ದಾರೆ.

ಕಟಾವಿನ ಅವಧಿ:


ಅಲ್ಲದೆ ಹೊಸ ಭತ್ತದ ತಳಿಯು 135 ದಿನಗಳಲ್ಲಿ ಕಟಾವಿಗೆ ಬರಲಿದ್ದು,
ಸಾಂಬಾ ಹಂಗಾಮಿಗೆ ಸೂಕ್ತವೆನಿಸಿದೆ.
ಈ ಭತ್ತದ ತಳಿಯು ಆರಂಭಿಕ ಹಂತದಲ್ಲೇ 14 ದಿನಗಳ ನಿರಂತರ ಪ್ರವಾಹ
ಮತ್ತು ಮುಳುಗಡೆಯನ್ನು ತಾಳಿಕೊಳ್ಳಬಲ್ಲದು ಎಂದು ವಿಜ್ಞಾನಿಗಳು ಮಾಹಿತಿ ನೀಡಿರುತ್ತಾರೆ.

ಇದನ್ನೂ ಓದಿ: ಗೃಹಜ್ಯೋತಿ ಯೋಜನೆ: ಗ್ರಾಹಕರು ಸೆಪ್ಟಂಬರ್‍ ತಿಂಗಳ ಉಚಿತ ಬಿಲ್ ಪಡೆಯಲು ‌ಆಗಸ್ಟ ಈ ತಾರೀಖುನೊಳಗೆ ಈ ಕೆಲಸ ಮಾಡಿ:

ಈ ತಳಿಯ ಇಳುವರಿ: (ಹೇಕ್ಟರ್‍ ಗೆ)


ಕೆಕೆಎಲ್(ಆರ್)2ನ ಸರಾಸರಿ ಇಳುವರಿಯು ಸಾಮಾನ್ಯ ಸಂದರ್ಭಗಳಲ್ಲಿ ಹೆಕ್ಟೇರ್‌ಗೆ 6,850 ಕೆ.ಜಿ ಇದ್ದರೆ,
ನೆರೆ /ಮುಳುಗಡೆಯಂಥ ಪರಿಸ್ಥಿತಿಗಳಲ್ಲಿ ಹೆಕ್ಟೇರಿಗೆ 3,600 ಕೆ.ಜಿ ಇಳುವರಿ ನೀಡಲಿದೆ ಎಂದು ಡಾ. ಎಸ್ .ತಿರುಮೇನಿ ಹೇಳಿದರು.

ಇದನ್ನು ಕೇಂದ್ರೀಯ ‘ವೆರೈಟಿ ರಿಲೀಸ್ ಕಮಿಟಿ’ (ಸಿವಿಆರ್‌ಸಿ) ಬಿಡುಗಡೆ ಶಿಫಾರಸು ಮಾಡಿದೆ.

ಇತ್ತೀಚಿನ ಸುದ್ದಿಗಳು

Related Articles