Friday, September 20, 2024

ಗುಡ್ ನ್ಯೂಸ್ :2000-11000/- ರೂ ಈ ವರ್ಗದ ಮಕ್ಕಳಿಗೂ ಮುಖ್ಯ ಮಂತ್ರಿ ರೈತ ವಿದ್ಯಾನಿಧಿ

ರೈತರ ಮಕ್ಕಳು ಸ್ನಾತಕೋತ್ತರ ಶಿಕ್ಷಣದವರೆಗೆ ವಿದ್ಯಾಭ್ಯಾಸ ಪಡೆಯಲು ಪ್ರೋತ್ಸಾಹಿಸಲು ಮಾನ್ಯ ಮುಖ್ಯ ಮಂತ್ರಿಗಳು “ಮುಖ್ಯ ಮಂತ್ರಿ ರೈತ ವಿದ್ಯಾ ನಿಧಿ” ಕಾರ್ಯಕ್ರಮವನ್ನು ಘೋಷಣೆ ಮಾಡಿರುತ್ತಾರೆ. ಈ ಕಾರ್ಯಕ್ರಮದಡಿ 8,9 ಮತ್ತು ಹತ್ತನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ರೈತ ಕುಟುಂಬದ ಹೆಣ್ಣು ಮಕ್ಕಳು ಮತ್ತು ಎಸ್.ಎಸ್.ಎಲ್.ಸಿ. 10ನೇ ತರಗತಿಯನ್ನು ಪೂರೈಸಿರುವ ಹಾಗೂ ಕರ್ನಾಟಕ ರಾಜ್ಯದ ಯಾವುದೇ ಭಾಗದಲ್ಲಿರುವ ಅಧಿಕೃತವಾಗಿ ನೋಂದಣಿಯಗಿರುವ ಶಿಕ್ಷಣ ಸಂಸ್ಥೆ/ವಿಶ್ವವಿದ್ಯಾ ನಿಲಯಗಳಲ್ಲಿ ಸ್ನಾತಕೋತ್ತರ ಕೋರ್ಸ ಗಳವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ರೈತರ ಮಕ್ಕಳು ಹಾಗೂ ಭೂ ರಹಿತ ಕೃಷಿ ಕಾರ್ಮಿಕರ ಮಕ್ಕಳು ವಿದ್ಯಾರ್ಥಿ ವೇತನ ಪಡೆಯಲು ಅರ್ಹರಿರುತ್ತಾರೆ. ವಿದ್ಯಾರ್ಥಿ ವೇತನವನ್ನು ವಾರ್ಷಿಕವಾಗಿ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ (Direct Benifit Transfer-DBT)ಪದ್ದತಿಯಮೂಲಕ ವರ್ಗಾಯಿಸಲಾಗುವುದು.

ಇದನ್ನೂ ಓದಿ: ಈ ಜಿಲ್ಲೆಯಲ್ಲಿ ಕರ್ನಾಟಕ ಓನ್ ತೆರೆಯಲು ಅವಕಾಶ? ಯಾವ ಜಿಲ್ಲೆ? ಅರ್ಹತೆ ಏನು? ಎಷ್ಟು ಕೇಂದ್ರ ತೆರೆಯಲು ಅವಕಾಶ?

2022-23ನೇ ಶೈಕ್ಷಣಿಕ ಸಾಲಿನಿಂದ ಮುಖ್ಯ ಮಂತ್ರಿ ರೈತ ವಿದ್ಯಾನಿಧಿ ಕಾರ್ಯಕ್ರಮವನ್ನು ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೆ ವಿಸ್ತರಿಸಲಾಗಿದೆ.

“ಮುಖ್ಯಮಂತ್ರಿ ರೈತ ವಿದ್ಯಾನಿಧಿ” ಕಾರ್ಯಕ್ರಮದಡಿ ನೀಡಲಾಗುವ ವಿದ್ಯಾರ್ಥಿ ವೇತನ ವಿವರ:
ಯೋಜನೆಯಡಿ ನೀಡಲಾಗುವ ವಾರ್ಷಿಕ ಶಿಷ್ಯವೇತನ


ಕ್ರ.ಸಂ ಕೋರ್ಸಗಳು ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು
1.ಪ್ರೌಢಶಾಲಾ ವಿದ್ಯಾರ್ಥಿನಿಯರು – ಇಲ್ಲ ರೂ.2,000/-
2.ಪಿ.ಯು.ಸಿ./ಐ.ಟಿ.ಐ /ಡಿಪ್ಲೋಮಾ – ರೂ.2,500/ ರೂ.3,000/-
3.ಬಿ.ಎ/ಬಿ.ಎಸ್.ಸಿ./ಬಿ.ಕಾಂ ಇನ್ನಿತರೆ ಪದವಿ ಕೋರ್ಸಗಳು – ರೂ.5,000/- ರೂ.5,500/-
4.ಎಲ್.ಎಲ್.ಬಿ/ಪ್ಯಾರಾಮೆಡಿಕಲ್/ಬಿ.ಫಾರ್ಮ/ನರ್ಸಿಂಗ್ – ರೂ.7,500/- ರೂ.8,000/-
ಇನ್ನಿತರೆ ವೃತ್ತಿಪರ ಕೋರ್ಸಗಳು
5.ಎಂ.ಬಿ.ಬಿ.ಎಸ್./ಬಿ.ಇ/ಬಿಟೆಕ್ ಮತ್ತು ಎಲ್ಲಾ ಸ್ನಾತಕೋತ್ತರ -ರೂ.10,000/- ರೂ.11,000
/-

ಇದನ್ನೂ ಓದಿ: ಆಧುನಿಕ ರೈತರಿಗೆ ಮಾದರಿಯಾದ ಮಲ್ಟಿ ಟ್ರೀ ಬೈಕ್ ಆವಿಷ್ಕರಿಸಿದ ಸಾಮಾನ್ಯ ರೈತ

ವಿ.ಸೂ.: ಪುನರಾವರ್ತಿತ ವಿದ್ಯಾರ್ಥಿಗಳು(Repeaters) ಅರ್ಹರಾಗಿರುವುದಿಲ್ಲ.

ಕ್ರ.ಸಂರೈತರ ಮಕ್ಕಳ ವಿದ್ಯಾರ್ಥಿವೇತನಭೂರಹಿತ ಕೃಷಿ ಕಾರ್ಮಿಕರ ಮಕ್ಕಳ ವಿದ್ಯಾರ್ಥಿವೇತನ
1ತಂದೆ/ತಾಯಿ/ಕುಟುಂಬ ಸದಸ್ಯರು                                   1.ತಂದೆ ಅಥವಾ ತಾಯಿ Fruits (Farmer Registration and Fruits (Farmer Registration and                 Unified Beneficiary Information System)ತಂತ್ರಾಂಶದಲ್ಲಿ Unified Beneficiary Information                                   ನೋಂದಣಿಯಾಗಿರಬೇಕು(WithLand) System)ತಂತ್ರಾಂಶದಲ್ಲಿ                                                               ತಂದೆ ಅಥವಾ ತಾಯಿ Fruits (Farmer Registration and Fruits (Farmer Registration and                 Unified Beneficiary Information System)ತಂತ್ರಾಂಶದಲ್ಲಿ Unified Beneficiary Information                                  ನೋಂದಣಿಯಾಗಿರಬೇಕು(WithoutLand)
22.ಕುಟುಂಬದ ಗುರುತಿನ ಸಂಖ್ಯೆ ಹೊಂದಿರಬೇಕು2. ಕುಟುಂಬದ ಗುರುತಿನ ಸಂಖ್ಯೆ ಹೊಂದಿರಬೇಕು. ತಂದೆ ಅಥವಾ ತಾಯಿ MGNREGA ಕಾರ್ಡ  ಹೊಂದಿರಬೇಕು.

“ಎಲ್ಲಾ ರೈತ ಮಕ್ಕಳ ಹಾಗು ಭೂರಹಿತ ಕೃಷಿ ಕಾರ್ಮಿಕರ ಮಕ್ಕಳುರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳಲು ವಿನಂತಿಸಿದೆ.
(https://ssp.postmatric.karnataka.gov.in)

ಹೆಚ್ಚಿನ ಮಾಹಿತಿಗಾಗಿ ರೈತ ಸಹಾಯವಾಣಿ 1800 425 3553 ಅಥವಾ ಸಹಾಯವಾಣಿ 1902ಗೆ ಕರೆಮಾಡಿ

ಇತ್ತೀಚಿನ ಸುದ್ದಿಗಳು

Related Articles