Thursday, September 19, 2024

New Ration Card Application Start: : ಈ ದಿನಾಂಕದಿಂದ ಹೊಸ ರೇಷನ್ ಕಾರ್ಡಅರ್ಜಿ ಸಲ್ಲಿಸಿ: ಕೆ.ಎಚ್. ಮುನಿಯಪ್ಪ ಭರವಸೆ

ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಫಲಾನುಭವಿಗಳಿಗೆ ಸರ್ಕಾರ ಶುಭ ಸುದ್ದಿ ನೀಡಿದೆ.ಹಾಗಿದ್ದರೆ,ಯಾವ ದಿನಾಂಕದಿಂದ ಅರ್ಜಿ ಸಲ್ಲಿಸಬಹುದು?ಅರ್ಜಿ ಸಲ್ಲಿಸಲು ಅರ್ಹತೆಗಳೇನು? ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ವಿವರಿಸಲಾಗಿದೆ.

ಹೊಸ ರೇಷನ್ ಕಾರ್ಡ್‌ಗಳಿಗೆ ಎ.1ರಿಂದ ಅರ್ಜಿ ಸ್ವೀಕರಿಸಲಾಗುತ್ತದೆ ಎಂದು ಆಹಾರ ಸಚಿವ ಕೆ. ಎಚ್. ಮುನಿಯಪ್ಪ ಆಶ್ವಾಸನೆ ನೀಡಿದ್ದಾರೆ. ಈಗಾಗಲೇ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್‌ಗಳಿಗೆ ಸಲ್ಲಿಕೆಯಾಗಿರುವ 2.95 ಲಕ್ಷ ಅರ್ಜಿಗಳನ್ನು ಮಾ. 31ರೊಳಗೆ ವಿಲೇವಾರಿ ಮಾಡುವುದಾಗಿ ಅವರು ಹೇಳಿದ್ದಾರೆ.

ಈಗಾಗಲೇ ರಾಜ್ಯಾದ್ಯಂತ ಸಲ್ಲಿಕೆಯಾಗಿರುವ 2.95 ಲಕ್ಷ ಬಿಪಿಎಲ್ BPL ಹಾಗೂ ಎಪಿಎಲ್ APL ಕಾರ್ಡ್‌ಗಳ ಅರ್ಜಿಗಳನ್ನು ಮಾ.31ರೊಳಗಾಗಿ ವಿಲೇವಾರಿ ಮಾಡುವುದಾಗಿ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಭರವಸೆ ನೀಡಿದ್ದಾರೆ. ಅಲ್ಲದೆ ಎ.1ರಿಂದ ಹೊಸ ಕಾರ್ಡ್‌ಗಳಿಗೆ ಅರ್ಜಿ ಸ್ವೀಕರಿಸಲಾಗುವುದು ಎಂದು ಅವರು ಆಶ್ವಾಸನೆ ನೀಡಿದ್ದಾರೆ.

ಇದನ್ನೂ ಓದಿ: Raita vidya nidhi-2024 ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ಸಂಭಂಧಿಸಿದಂತೆ ಮಹತ್ವದ ಮಾಹಿತಿ ಪ್ರಕಟಣೆ: ಕೃಷಿ ಇಲಾಖೆ .

ಬೆಂಗಳೂರಿನ ವಿಧಾನ ಮಂಡಲ ಅಧಿವೇಶನದಲ್ಲಿ ಬಿಜೆಪಿಯ ಯಶ್‌ಪಾಲ್ ಸುವರ್ಣ ಹಾಗೂ ಕಾಂಗ್ರೆಸ್‌ನ ನಯನಾ ಮೋಟಮ್ಮರವರ ಪ್ರಶ್ನೆಗಳಿಗೆ ಉತ್ತರಿಸಿದ ಆಹಾರ ಇಲಾಖೆಯ ಸಚಿವರು ಕೆ.ಎಚ್. ಮುನಿಯಪ್ಪನವರು ಹಿಂದಿನ ಸರಕಾರದ ಅವಧಿಯಲ್ಲಿ ಬಂದಿದ್ದ2,59,986 ಅರ್ಜಿಗಳ ಪರಿಶೀಲನೆ ನಡೆಸುತ್ತಿದ್ದು, ಅವುಗಳ ಪೈಕಿ ಎಪಿಎಲ್ ಹಾಗೂ ಬಿಪಿಎಲ್ ಅರ್ಜಿಗಳನ್ನು ಪ್ರತ್ಯೇಕಗೊಳಿಸುತ್ತಿದ್ದೇವೆ. ತುರ್ತು ವೈದ್ಯಕೀಯ ಸೇವೆಯ ಕಾರ್ಡ್‌ಗಳನ್ನು ಆದ್ಯತೆ ಮೇರೆಗೆ ವಿತರಿಸಲಾಗುತ್ತಿದ್ದು ಈಗಾಗಲೇ ೭೪೪ ಕಾಡ್೯ ವಿತರಿಸಲಾಗಿದೆ. ಹಾಗೂ 57561 ಎಪಿಎಲ್ ಕಾರ್ಡ್‌ಗಳನ್ನು ಸಹ ವಿತರಿಸಿದ್ದೇವೆ ಎಂದು ತಿಳಿಸಿದರು.ಆಹಾರ ಸಚಿವ ಕೆ.ಎಚ್. ಮುನಿಯಪ್ಪ
ತಿಳಿಸಿದರು.

Eligibility to Apply: ಅರ್ಹತೆ ಮತ್ತು ಮಾನದಂಡದ ವಿವರ

ಬಿಪಿಎಲ್ ಕಾರ್ಡ್‌ನ್ನು ಸರಕಾರಿ ಹಾಗೂ ಅನುದಾನಿತ ಸಂಸ್ಥೆಗಳಲ್ಲಿನ ಖಾಯಂ ನೌಕರರು, ಪಡೆಯಲು ಅನರ್ಹರು,
ಆದಾಯ ತೆರಿಗೆ, ಇರುವರು ಅನರ್ಹರಾಗಿರುತ್ತಾರೆ.
ಸೇವಾ ತೆರಿಗೆ, ಜಿಎಸ್‌ಟಿ, ವೃತ್ತಿ ತೆರಿಗೆ ಪಾವತಿಸುವ ಕುಟುಂಬಳಿಗೆ ಹೊಸ ರೇಷನ್ ಕಾರ್ಡ ಕೊಡಲಾಗುವುದಿಲ್ಲ.
ಆ ಒಂದು ಕುಟುಂಬದ 1.20 ಲಕ್ಷ ರೂ.ಗೂ ಅಧಿಕ ವಾರ್ಷಿಕ ಆದಾಯ ಇದ್ದರೆ, ಅನರ್ಹರಾಗಿರುತ್ತಾರೆ.


ಗ್ರಾಮೀಣ ಪ್ರದೇಶಗಳಲ್ಲಿ 3 ಹೆಕ್ಟೇರ್ ಕೃಷಿ ಭೂಮಿ, ನಗರ ಪ್ರದೇಶದಲ್ಲಿ 1000 ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಪಕ್ಕಾ ಮನೆ ಇದ್ದರೆ ಅಂತವರಿಗೂ ಬಿಪಿಎಲ್ ಕಾರ್ಡ್ ಕೊಡುವುದಿಲ್ಲ.


ಅಷ್ಟೇ ಅಲ್ಲದೆ ಜೀವನೋಪಾಯಕ್ಕಾಗಿ ಟ್ರ್ಯಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಚಲಾಯಿಸುವವರನ್ನು ಹೊರತುಪಡಿಸಿ ನಾಲ್ಕು ಚಕ್ರದ ವಾಹನ ಹೊಂದಿರುವ ಕುಂಟುಂಬಕ್ಕೂ ಬಿಪಿಎಲ್ ಕಾರ್ಡ್ ಪಡೆಯು ಅರ್ಹತೆ ಇಲ್ಲ ಎಂದು ಹೇಳಿದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: HSRP number plate- ವಾಹನಗಳಿಗೆ ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಸದಿದ್ದಲ್ಲಿ ರೂ. 500 ರಿಂದ 1000 ದಂಡ! ಸಾರಿಗೆ ಸಚಿವ ರಾಮಲಿಂಗಾರೆಡ್ಡಿ*

DBT system information : ಸರ್ಕಾರದಿಂದ ಇಲ್ಲಿವರೆಗೂ ನಿಮಗೆ ಬಂದಿರುವ ಹಣ ಎಷ್ಡು? ನೀವೇ ಪರೀಕ್ಷಿಸಿಕೊಳ್ಳಿ!!

ಹೌದು,ಆಗಿದ್ದರೆ ಈ ನೇರ ನಗದು ವರ್ಗಾವಣೆ ಮೂಲಕ ಸರ್ಕಾರ ಯಾವ ಯಾವ ಯೋಜನೆಗಳ ಆರ್ಥಿಕ ಸಹಾಯ ನಿಮ್ಮ ಖಾತೆಗೆ ಜಮಾ ಆಗಿರುತ್ತದೆ. ಅಂತ ನಿಮ್ಮ ಮೋಬೈಲ್ ಮೂಲಕವೇ ನೋಡಬಹುದಾಗಿರುತ್ತದೆ.
ಮೊದಲು ಈ ತಿಳಿಸಿರುವ ಮಾಹಿತಿಯನ್ನು ಸರಿಯಾಗಿ ಓದಿಕೊಳ್ಳಿ.

ನಾವು ಈ ಲೇಖನದಲ್ಲಿ ಆ ಒಂದು ನೇರ ನಗದು ವರ್ಗಾವಣೆ ಚೆಕ್ ಮಾಡುವ ಅಪ್ಲಿಕೇಶನ್ ಬಗ್ಗೆ ಮತ್ತು ಅದನ್ನು ಉಪಯೋಗ ಮಾಡುವ ಬಗ್ಗೆ ಸಂಪೂರ್ಣವಾಗಿ ತಿಳಿಸಿದ್ದೆವೆ.

ಹಂತ: 1:ಮೊದಲು ಈ ಆಪ್ಲಿಕೇಶನ್ ನನ್ನು Install ಮಾಡಿಕೊಳ್ಳಿ, ನಂತರ ನಿಮ್ಮ ಆಧಾರ್ ನಂಬರ್ ಹಾಕಿ Get OTP ಮೇಲೆ ಕ್ಲಿಕ್ ಮಾಡಿ ಮುಂದೆ, OTP Varify OTP ಮೇಲೆ ಕ್ಲಿಕ್ ಮಾಡಿ

ಹಂತ:2:ನಂತರ ನಿಮಗೆ ಬೇಕಾದ 4 ಸಂಖ್ಯೆಯ mPIN create ,Confirm mPIN ರಚಿಸಿಕೊಳ್ಳಿ ಉದಾ: 1234, ಈ ರೀತಿಯಾಗಿ ಮಾಡಿಕೊಂಡ ನಂತರ Submit ಮೇಲೆ ಓತ್ತಿ.

ಹಂತ: 3: ನಂತರ payment status ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮಗೆ ಇಲ್ಲಿಯವರೆಗೂ ಸರ್ಕಾರದಿಂದ ಬಂದಿರುವ ಸಹಾಯಧನ ಗೋಚರಿಸುತ್ತದೆ.

DBT Karnataka-ಸರ್ಕಾರದಿಂದ ನಿಮಗೆ ಇಲ್ಲಿಯವರೆಗೂ ಯಾವ ಯೋಜನೆಯಿಂದ ಎಷ್ಟು ಹಣ ಜಮಾ ಆಗಿದೆ ಎಂದು ಚೆಕ್ ಮಾಡುವ ಡೈರೆಕ್ಟ್ ಲಿಂಕ್

https://play.google.com/store/apps/details? id=com.dbtkarnataka

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ DBT Karnataka application install ಮಾಡಿಕೊಂಡು ಇನ್ನು ಮುಂದೆ ಸರ್ಕಾರದ ಯಾವುದೇ ಸಹಾಯಧನ ಬಂದಿರುವ ಬಗ್ಗೆ ಮಾಹಿತಿ ನಿಮ್ಮ ನಿಮ್ಮ ಮೊಬೈಲ್ ನಲ್ಲಿ ಪರೀಕ್ಷೀಸಿಕೊಳ್ಳಿ.

ಇದನ್ನೂ ಓದಿ: Drought relief Grant district wise: ಯಾವ ಜಿಲ್ಲೆಗೆ ಎಷ್ಟು ಬರ ಪರಿಹಾರ ಹಣ? ಯಾರಿಗೆ ಜಮಾ ?

ಇತ್ತೀಚಿನ ಸುದ್ದಿಗಳು

Related Articles