Thursday, September 19, 2024

Hakku Patra: ರಾಜ್ಯದ 7 ಸಾವಿರ ರೈತರಿಗೆ ಹಕ್ಕು ಪತ್ರ !! ಏಷ್ಟು ಎಕರೆ ಭೂಮಿ ಪತ್ರ ವಿತರಣೆ?ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ:

ಆತ್ಮೀಯ ರೈತ ಬಾಂದವರೇ ರೈತರ ಹಕ್ಕು ಪತ್ರ ಅರ್ಜಿ ವಿಲೇವಾರಿಯು ಕಳೆದ ಹಲವು ವರ್ಷಗಳಿಂದ ಹಾಗೆಯೇ ಉಳಿದ್ದು ಈ ಅರ್ಜಿಯ ವಿಲೇವಾರಿ ಕುರಿತು ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಮಹತ್ವದ ಮಾಹಿತಿಯನ್ನು ವ್ಕಕ್ತಪಡಿಸಿದ್ದಾರೆ. ಹಾಗಿದ್ದರೆ ಈ ಹಕ್ಕು ಪತ್ರ ಅಂದರೇನು? ಅದರಿಂದ ಪ್ರಯೋಜನವೇನು? ಇದಕ್ಕೆ ಅರ್ಹರು ಯಾರು? ವಿತರಣೆ ಯಾವಾಗ? ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೋಡೋಣ…

ಒಬ್ಬ ವ್ಯಕ್ತಿ ಅಥವಾ ನಾಗರಿಕನು ಆಸ್ತಿಯನ್ನು ಹೊಂದಿದ್ದರೂ ಅದನ್ನು ಕಾನೂನಾತ್ಮಕವಾಗಿ ಸಾಬೀತುಪಡಿಸಲು ದಾಖಲೆಗಳನ್ನು ಹೊಂದಿಲ್ಲದಂತಹ ಸನ್ನಿವೇಶದಲ್ಲಿ ಆ ವ್ಯಕ್ತಿಗೆ ತನ್ನ ಜಮೀನನ್ನ ಕಾನೂನಾತ್ಮಕವಾಗಿ ಹಕ್ಕನ್ನು ಸಾಬೀತುಪಡಿಸಲು ಸರಕಾರದಿಂದ ನೀಡುವ ಪ್ರತ್ರಕ್ಕೆ ಹಕ್ಕು ಪತ್ರ ಎಂದು ಕರೆಯುತ್ತಾರೆ.

ಹೌದು ಈ ಹಕ್ಕು ಪತ್ರ ಅರ್ಜಿ ವಿಲೇವಾರಿಯ ಸಂಭಂಧ ರಾಜ್ಯದ ಕರಾವಳಿ ಮತ್ತು ಮಲೆನಾಡು ಇತರೆ ಭಾಗದ ಜನರು ಯಾವುದೇ ಇಲಾಖೆಯ ಯೋಜನೆಗಳ ಸಹಾಯಧನ ಪಡೆಯಲು ಮತ್ತು ಫಲಾನುಭವಿಗಳು ಆಗಲು ಅನರ್ಹರಾಗಿದ್ದರು. ಈಗ ಈ ಹಕ್ಕು ಪತ್ರ ಸಿಗುವುದರಿಂದ ಯೋಜನೆಗಳ ಲಾಭ ಪಡೆಯಲು ಅರ್ಹರಾಗಬಹುದು.

ಇದನ್ನೂ ಓದಿ: Bara Parihara list-2024: ರಾಜ್ಯದ 29 ಲಕ್ಷ ರೈತರಿಗೆ 545 ಕೋಟಿ ಬರ ಪರಿಹಾರ !! ನಿಮಗೂ ಬಂದಿದೇ ಚೆಕ್ ಮಾಡಿ??

ಈಗಾಗಲೇ ಹಕ್ಕು ಪತ್ರ ಪಡೆಯಲು ಅರ್ಜಿ ಸಲ್ಲಿಸಿರುವ ರೈತರಿಗೆ ಈ ಯೋಜನೆಯ ಪ್ರಯೋಜನ ದೊರೆಯಲಿದ್ದು ಇಲಾಖೆಯ ಮಾಹಿತಿಯ ಪ್ರಕಾರ ಇಲ್ಲಿಯವರೆಗೆ ಒಟ್ಟು 13,750 ಅರ್ಜಿಗಳು ಸಲ್ಲಿಕೆಯಾಗಿದ್ದು.

ಒಟ್ಟು ಸಲ್ಲಿಕೆಯಾದ ಅರ್ಜಿಯ ಪ್ರಕಾರ 31,864 ಎಕರೆ ಭೂಮಿಯನ್ನು ಹೊಂದಿರುತ್ತದೆ ಈ ಅರ್ಜಿಯಲ್ಲಿ ಮಾರ್ಗಸೂಚಿ ಪ್ರಕಾರ ಅರ್ಹ ರೈತರನ್ನು ಗುರುತಿಸುವ ಪ್ರಕ್ರಿಯೆ ಇಲಾಖೆ ನಡೆಯುತ್ತಿದೆ.


ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಿರುವ 13,750 ಪ್ರಕರಣಗಳ 31,864 ಎಕರೆ ಭೂಮಿ ಇದೆ. ಈ ಪೈಕಿ 7 ಸಾವಿರ ಪ್ರಕರಣಗಳಿಗೆ ಹಕ್ಕು ಪತ್ರ ನೀಡಲಾಗುವುದು. ಆದರೆ 3 ಎಕರೆಗಿಂತ ಹೆಚ್ಚಿನ ಭೂಮಿ ನೀಡುವುದಿಲ್ಲ ಎಂದು ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಮಾಹಿತಿ ನೀಡಿರುತ್ತಾರೆ.

ಸಚಿವರು ಹಂಚಿಕೊಂಡಿರುವ ಮಾಹಿತಿಯನ್ವಯ ಅರಣು ಇಲಾಖೆಗೆ ಸೇರಿದ ಭೂಮಿಯಲ್ಲಿ ಅರಣ್ಯ ಸಂರಕ್ಷಣಾ ಕಾಯಿದೆ 1980 ಜಾರಿಗೂ ಮುನ್ನ ಕೃಷಿ ಮಾಡುತ್ತಿರುವವರಿಗೆ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಅರ್ಜಿ ವಿಲೇವಾರಿ ಪ್ರಕ್ರಿಯೆಯು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಂದ ನಡೆಯುತ್ತಿದ್ದು ಅರ್ಹ ಫಲಾನುಭವಿ ರೈತರಿಗೆ ಈ ತಿಂಗಳ ಒಳಗಾಗಿ ಅಂದರೆ ಜನವರಿ-2024ರ ಒಳಗಾಗಿ 7 ಸಾವಿರ ರೈತರಿಗೆ ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಮಾಹಿತಿ ನೀಡಿರುತ್ತಾರೆ.

ಇದನ್ನೂ ಓದಿ: ಭೂಮಿ ಸೇವೇಗಳು, ಮೋಜಿನಿ ಸೇವೆಗಳು, ಇತರೆ ಸೇವೆಗಳ ದರಪಟ್ಟಿ?

ಇಲ್ಲಿ ಓತ್ತಿ ನಿಮಗೆ ಅರಣ್ಯ ಸಂರಕ್ಷಣಾ ಕಾಯಿದೆ– ಪ್ರತಿ ದೊರೆಯುವುದು.

ವ್ಯಕ್ತಿಗೆ ಭೂಮಿಯನ್ನು ಹೊಂದಿರುವ ಕುರಿತು ಅಧಿಕೃತ ದಾಖಲೆ ಇದಾಗಿರುತ್ತದೆ. ಸರಕಾರವೇ ಈ ದಾಖಲೆಯನ್ನು ನೀಡುವುದರಿಂದ ಯಾವುದೇ ರೀತಿಯ ದಾಖಲೆ ಸಂಶೋಧನೆ ಮಾಡುವುದು ಅವಶ್ಯವಿರುವುದಿಲ್ಲ.
ಸ್ಥಳಿಯವಾಗಿ ಇಲಾಖೆಯಗಳ ಯೋಜನೆಗಳ ಲಾಭ ಮತ್ತು ಸಹಾಯಧನವಾಗಲಿ, ಅಥವಾ ಯೋಜನೆಗಳ ಫಲಾನುಭವಿಗಳು ಆಗಲು ಅರ್ಹರಾಗಿರುತ್ತಾರೆ.

ಇದನ್ನೂ ಓದಿ: Agriculture Mechanization Scheme: ಯಂತ್ರ ಚಾಲಿತ ಎಣ್ಣೆಗಾಣಕ್ಕೆ, ಮತ್ತು ತಾಡಪತ್ರೆಗೆ, ಹಾಗೂ ಟ್ರಾಕ್ಟರ್‍ ಗೆ ಶೇ.90ರ ಸಹಾಯಧನ:

ಇತ್ತೀಚಿನ ಸುದ್ದಿಗಳು

Related Articles