Friday, September 20, 2024

Farmers Accidentally Death-ರೈತರು ಕೃಷಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ಮರಣ ಹೊಂದಿದರೆ ವಿವಿಧ ಇಲಾಖೆಗಳಿಂದ 2ಲಕ್ಷದ ಪರಿಹಾರ ಧನ ಸಿಗುತ್ತದೆ.

ಭಾರತ ದೇಶವು ಕೃಷಿ ಪ್ರಧಾನ ದೇಶವಾಗಿದೆ. ಭಾರತ ದೇಶದಲ್ಲಿ ಕೃಷಿ ಕಾರ್ಯಗಳಲ್ಲಿ ತೊಡಗಿರುವ ರೈತರು ಮರಣ ಹೊಂದುವುದರ ಪ್ರಮಾಣ ದೇಶದಲ್ಲಿ ಹೆಚ್ಚುತ್ತಲೇ ಹೋಗುತ್ತಿದೆ. ರೈತರು ಕೃಷಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ಮರಣ ಹೊಂದಿದರೆ ವಿವಿಧ ಇಲಾಖೆಗಳಿಂದ ಪರಿಹಾರ ಧನ ಸಿಗುತ್ತದೆ. ಅದರ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಕರ್ನಾಟಕ ರಾಜ್ಯದ ರೈತರಿಗೆ ಕೃಷಿ ಕೆಲಸ ಮಾಡುವಾಗ (Farmers Accidentally Death)ಆಕಸ್ಮಿಕವಾಗಿ ಮರಣ ಹೊಂದಿದರೆ ವಿವಿಧ ಇಲಾಖೆಗಳಿಂದ ಪರಿಹಾರ ಧನ ಸಿಗುವ ವ್ಯವಸ್ತೆಯನ್ನು ರಾಜ್ಯ ಸರಕಾರ ಅಳವಡಿಸಿಕೊಂಡಿದೆ. ಯಾವೆಲ್ಲ ಇಲಾಖೆಗಳಿಂದ ರೈತರಿಗೆ ಪರಿಹಾರ ಧನ ಸಿಗುತ್ತದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳುವ.

ಕರ್ನಾಟಕ ರಾಜ್ಯದ ರೈತರಿಗೆ ಕೃಷಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ಮರಣ(Farmers Accidentally Death) ಹೊಂದಿದರೆ ಕೃಷಿ ಇಲಾಖೆ(Agriculture dept), ತೋಟಗಾರಿಕೆ ಇಲಾಖೆ (Horticulture dept), ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಇಲಾಖೆ(APMC) ಈ ಇಲಾಖೆಗಳಿಂದ 2 ಲಕ್ಷದವರೆಗೆ ಪರಿಹಾರ ಧನ ನೀಡುವ ವವ್ಯಸ್ತೆಯನ್ನು ಕಲ್ಪಿಸಲಾಗಿದೆ.

ಇದನ್ನೂ ಓದಿ:ಕ್ರಿಮಿನಾಶಕಗಳನ್ನು ಬಳಸುವಾಗ ರೈತರು ತೆಗೆದುಕೊಳ್ಳಬೇಕಾದ ಮುನ್ನಚ್ಚರಿಕೆ ಕ್ರಮಗಳು

ಕೃಷಿ ಕೆಲಸ ಮಾಡುವಾಗ ರೈತರು ಮರಣ ಹೊಂದುವ ವಿಧಗಳು:

1)ಕೃಷಿ ಕೆಲಸ ಮಾಡುವಾಗ ಹಾವು ಕಚ್ಚಿ ಮರಣ ಹೊಂದುವುದು.

2)ಕೃಷಿ ಕೆಲಸದಲ್ಲಿ ಹಾರ್ಟ್ ಫೇಲಾಗಿ ಮರಣ ಹೊಂದುವುದು.

3)ಕೃಷಿ ಕೆಲಸ ಮಾಡುವಾಗ ಸಿಡಿಲು ಬಡಿದು ಮರಣ ಹೊಂದುವುದು.

4)ಅಡಿಕೆ ಮರ, ತೆಂಗಿನ ಮರ ಇನ್ನಿತರ ಮರಗಳ ಮೇಲಿಂದ ಬಿದ್ದು ಮರಣ ಹೊಂದುವುದು.

5)ಕೃಷಿ ಕೆಲಸ ಮಾಡುವಾಗ ಕಾಡು ಪ್ರಾಣಿಗಳ ದಾಳಿಯಿಂದ ಮರಣ ಹೊಂದುವುದು.

ಈ ಮೇಲೆ ತಿಳಿಸಲಾದ ವಿಧಗಳಲ್ಲಿ ಯಾವುದಾದರು ಒಂದು ವಿಧದಲ್ಲಿ ರೈತರು ಮರಣ ಹೊಂದಿದರೆ ಕೃಷಿ ಇಲಾಖೆ(Agriculture dept), ತೋಟಗಾರಿಕೆ ಇಲಾಖೆ (Horticulture dept), ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಇಲಾಖೆ(APMC) ಈ ಇಲಾಖೆಗಳಲ್ಲಿ ಯಾವುದಾದರು ಒಂದು ಇಲಾಖೆಗೆ (Farmers Accidentally Death)ಆಕಸ್ಮಿಕ ಮರಣ ಅರ್ಜಿ ಸಲ್ಲಿಸಿ 2 ಲಕ್ಷವರೆಗೆ ಪರಿಹಾರ ಧನವನ್ನು ರೈತ ಕುಟುಂಬದವರು ಪಡೆಯಬಹುದು.

ಇದನ್ನೂ ಓದಿ:ಬೀಜ, ಗೊಬ್ಬರ ಮತ್ತು ಕೀಟನಾಶಕಗಳ ಮಾರಾಟ ಪರವಾನಿಗೆ ಪಡೆಯಬೇಕಾದರೆ ಈ ಕೋರ್ಸ ಮಾಡಿದರೆ ಸಾಕು!

ಆಕಸ್ಮಿಕ ಮರಣ ಪ್ರಕರಣಕ್ಕೆ ಪರಿಹಾರ ಕೋರಿ ಸಲ್ಲಿಸಬೇಕಾದ ದಾಖಲೆಗಳು:

1)ಪೋಲಿಸ್ ಅಂತಿಮ ವರದಿ(police report).

2)ವೈದ್ಯಾಧಿಕಾರಿಗಳ Post mortem report.

3)FIR ವರದಿ.

4)ಮರಣ ಪ್ರಮಾಣ ಪತ್ರ(Death certificate)  

5)ಆಧಾರ್ ಪ್ರತಿ-ಮೃತರು ಹಾಗೂ ಅರ್ಜಿದಾರರು

6)ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್

7)ಪಡಿತರ ಚೀಟಿ ಪ್ರತಿ

8) APMC ರವರಿಂದ NOC

9)ಕಂದಾಯ ಇಲಾಖೆಯ ಮಹಜರು ವರದಿ

10)ವಂಶವೃಕ್ಷದ ದೃಢೀಕರಣ ಪ್ರತಿ

11)RTC ಅಥವಾ ಮೃತರು ಕೃಷಿ ಕಾರ್ಮಿಕರೆಂಬ  ಬಗ್ಗೆ ಕಂದಾಯ ಇಲಾಖೆ ದೃಢೀಕರಣ

12)ಅರ್ಜಿದಾರರ ಪೋಟೋ-1

13)ಮೃತರ ವಾರಿಸುದಾರರು, ವಯಸ್ಕರಾಗಿದ್ದಲ್ಲಿ ಅರ್ಜಿದಾರರಿಗೆ ಪರಿಹಾರ ನೀಡಲು ಅಭ್ಯಂತರವಿಲ್ಲವೆಂಬ ಬಗ್ಗೆ ನೋಟರಿ ಒಪ್ಪಿಗೆ ಪತ್ರ

14)ಕೃಷಿ ಇಲಾಖೆ ಮಹಜರು ವರದಿ

ಇತ್ತೀಚಿನ ಸುದ್ದಿಗಳು

Related Articles