ಇತ್ತಿಚೀನ ದಿನಮಾನಗಳಲ್ಲಿ ಕೃಷಿ ಮಾಡಲು ಕೂಲಿ (ಕೆಲಸಗಾರರ) ಕೊರತೆಯ ಅಭಾವ, ನಮ್ಮಗೆಲ್ಲಾ ಗೊತ್ತಿರುವ ವಿಷಯ. ಮೊದಲೆಲ್ಲಾ ಅವಿಭಕ್ತ ಕುಟುಂಬ ಇರುತ್ತಿತ್ತು ತಮ್ಮ ಜಮೀನಲ್ಲಿ ಕುಟುಂಬದವರೆ,ನಿಭಾಯಿಸಿಕೊಂಡು
ತಮ್ಮ ಜಮೀನನ್ನು ಸಾಗುವಳಿ ಮಾಡುತ್ತಿದ್ದರು, ಆದರೆ ಆಧುನಿಕ ಯುಗದಲ್ಲಿ, ಕೆಲಸಗಾರರ ಕೊರತೆ ಮತ್ತು ತುಂಡು ಜಮೀನಗಳು ಬೆಳೆಗಳನ್ನು ಬೆಳೆಯಲು ಬಿತ್ತನೆ ಬೀಜ, ರಾಸಾಯನಿಕಗಳಿಗೆ, ಗೊಬ್ಬರಗಳಿಗೆ, ಅದರ ಖರ್ಚುವೆಚ್ಚಗಳೆ ದುಬಾರಿ ಆಗಿರುವ ಸನ್ನಿವೇಶಗಳಲ್ಲಿ ಅನಿರ್ವಾಯವಾಗಿ ಯಂತ್ರೋಪಕರಣ ಮೊರೆ ಹೋಗುವುದು ಸರ್ವೆಸಾಮಾನ್ಯವಾಗಿದೆ.ಈಗಿರುವಾಗ ಇಂದಿನ ಆಧುನಿಕ ಯುಗದಲ್ಲಿ ಯಂತ್ರಗಳ ಬಳಕೆಯಿಂದ ಪ್ರತಿಯೊಂದು ಕೆಲಸವೂ ನಿಮಿಷಗಳಲ್ಲಿ ಮುಗಿಯುತ್ತದೆ.
ಈ ಕಾರಣದಿಂದಾಗಿ ಯಾಂತ್ರಿಕರಣಕ್ಕೆ ಉತ್ತೇಜನ ಸಿಕ್ಕಿದೆ. ಎಲ್ಲಾ ರೀತಿಯ ಕೆಲಸಗಳಿಗೆ ಯಂತ್ರ ಮಾರುಕಟ್ಟೆಯಲ್ಲಿ ಮತ್ತು ಸಂಬಂಧ ಪಟ್ಟ ಇಲಾಖೆಗಳಲ್ಲಿ ಲಭ್ಯವಾಗಿವೆ. ಉದಾ: ನೀರಾವರಿಗೆ ತುಂತುರು ಘಟಕ, ಹನಿ ನೀರಾವರಿ ಘಟಕ, ಉಳುಮೆಗೆ: ಟ್ರಾಕ್ಟರ್, ರೋಟೋವೆಟರ್, ಪವರ್ ಟಿಲರ್, ಸಿಂಪರಣೆ ವಿಭಾಗದಲ್ಲಿ:ಸ್ಪ್ರೇಯರ್, ಗಟಾರ್ ಸ್ಪ್ರೇಯರ್, ಇತ್ಯಾದಿ, ಹೀಗೆ ಎಲ್ಲಾ ರೀತಿಯ ಯಂತ್ರಗಳು ಇಲಾಖೆಗಳಲ್ಲಿ ಸಹಾಯಧನದಲ್ಲಿ ದೊರೆಯುತ್ತಿರುತ್ತವೆ.
ಕೇಂದ್ರ ಸರ್ಕಾರದ ಕಿಸಾನ್ ಪುಷ್ಕರ್ ಯೋಜನೆಯಡಿ, ಮತ್ತು ಯೂನಿಯನ್ ಬ್ಯಾಂಕ ಸಹಯೋಗ:
ಕೇಂದ್ರ ಸರ್ಕಾರದ ಕಿಸಾನ್ ಪುಷ್ಕರ್ ಯೋಜನೆಯಡಿ, ಮತ್ತು ಯೂನಿಯನ್ ಬ್ಯಾಂಕ ಸಹಯೋಗದಲ್ಲಿ ಸುಮಾರು 150 ಡ್ರೋನ್ ಅರ್ಜಿಗಳಿಗೆ ಸಾಲವನ್ನು ಅನುಮೋದಿಸಿದೆ. ಈ ಡ್ರೋನ್ ಗಳು ಈಗ ಕೃಷಿ ಮತ್ತು ತೋಟಗಾರಿಗೆ ಬೆಳೆಗಳಲ್ಲಿ ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಸಿಂಪಡಿಸುವುದನ್ನು, ಮತ್ತು ಕೆಲಸಗಾರರ ಕೊರತೆಯನ್ನು ನಿಭಾಯಿಸಿ ರೈತರಿಗೆ ತಂತ್ರಜ್ಙಾನದೊಂದಿಗೆ ಸಂಪರ್ಕ ಸಾಧಿಸಲು ಮತ್ತು ಆಧುನಿಕ ಕೃಷಿ ಮಾಡಲು ಸಹಾಯ ಮಾಡುತ್ತವೆ.
ಡ್ರೋನ್ ಗಳಿಗೆ ನಿಧಿಗಳು ಮತ್ತು ರೈತರಿಗೆ ತರಬೇತಿ:
ಯೂನಿಯನ್ ಬ್ಯಾಂಕ ಆಫ್ ಇಂಡಿಯಾದ ಸಹಯೋಗದಲ್ಲಿ ಈಗ ದೇಶದ ವಿವಿಧ ಭಾಗಗಳಲ್ಲಿ ಡ್ರೋನ್ ತಂತ್ರಜ್ಞಾನದೊಂದಿಗೆ ರೈತರನ್ನು ಸಂಪರ್ಕಿಸುವುದು ಅತ್ಯಂತ ಸುಲಭವಾಗಿದೆ.ತರಬೇತಿಗಾಗಿ ಗರುನ್ ಏರೋಸ್ಪೇಸ್ ಒಂದು ಲಕ್ಷ ಯುವಕರಿಗೆ ಮತ್ತು ರೈತರಿಗೆ ಡ್ರೋನ್ ಗಳನ್ನು ಹಾರಿಸಲು ತರಬೇತಿಯನ್ನು ನೀಡಲು ಮುಂದಾಗಿದೆ.150 ಡ್ರೋನ್ ಅಪ್ಲಿಕೇಶನ್ಗಲೊಂದಿಗೆ ಇದನ್ನು ಚಾಲನೆ ನೀಡಲಾಗುತ್ತಿದ್ದು ಇದಕ್ಕಾಗಿ 150 ಪೈಲಟಗಳು ಹಾರಲು ಸಿದ್ದರಾಗಿದ್ದಾರೆ. ಅವರು ತಮ್ಮ ಸೇವೆಯನ್ನು ದೇಶಕ್ಕೆ ಅನ್ನ ನೀಡುವ ದೇಶದ ಬೆನ್ನೆಲಬು ಆಗಿರುವ ರೈತನಿಗೆ ಸೇವೆ ಒದಗಿಸಲು ಸಿದ್ದರಿದ್ದಾರೆ ಮತ್ತು ಅವರ ಆದಾಯವನ್ನು ದ್ವಿಗುಣಗೊಳಿಸಲು ಸಹಾಯಕ್ಕೆ ಸರ್ಕಾರ ಈ ಕಾರ್ಯಕ್ಕೆ ನಿರ್ಧರಿಸಿದೆ ಅಂತ ತಿಳಿಯಬಹುದು.
ಮುಂದಿನ ಕಾಲ ಮಾನಗಳಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆ ಬರಬಹುದಾಗಿರುತ್ತದೆ. ಹಾಗಾಗಿ ಮಾರ್ಚ 31,2023 ಅಂತ್ಯದ ವೇಳೆಗೆ ಸುಮಾರು 5000,ಡ್ರೋನ್ ಗಳನ್ನು ನೀಡಲು ಗುರಿಯನ್ನು ಹೊಂದಿದೆ. ಹಾಗೂ ರೈತರಿಗೆ ಇದರ ಉಪಯೋಗ ಕೂಡ ಸಿಗುವುದು ಖಚಿತವಾಗಿರುತ್ತದೆ.