Tuesday, June 24, 2025

ಕಳೆದ ವರ್ಷದ ನಿಮ್ಮ ಬೆಳೆ ವಿಮೆ ಅರ್ಜಿ ಸ್ಥಿತಿ ಪರೀಕ್ಷಿಸಿ :

Crop insurance application: ಬೆಳೆ ವಿಮೆ ಅರ್ಜಿ, ಯಾವ ಬೆಳೆಗೆ ಎಷ್ಟು ವಿಮೆ? ಕೊನೆಯ ದಿನಾಂಕ ಯಾವಾಗ?

ಆತ್ಮೀಯ ರೈತ ಬಾಂದವರೇ ಪ್ರತಿ ವರ್ಷದಂತೆ ಈ ವರ್ಷವು 2025-26 ನೇ ಸಾಲಿನ ಮುಂಗಾರು ಬೆಳೆ ವಿಮೆ ಅರ್ಜಿ ಪ್ರಾರಂಭವಾಗಿರುತ್ತವೆ.
ರೈತ ಮಿತ್ರರೇ , ಪ್ರತಿ ವರ್ಷದಂತೆ ಈ ವರ್ಷವು ಮುಂಗಾರು ಬೆಳೆವಿಮೆ ಆರಂಭವಾಗಲಿದ್ದು, ಸುರಕ್ಷತೆ ಮತ್ತು ರೈತರಿಗೆ ಯಾವುದೇ ಅನ್ಯಾಯವಾಗದಿರಲು ವಿಮೆ ಹಣ ನೇರವಾಗಿ ನಿಮ್ಮ ಖಾತೆಗೆ ಜಮೆಯಾಗಲು ಸರಕಾರ ಕೆಲವು ಮಹತ್ವ ಬದಲಾವಣೆ ತಂದಿರುತ್ತದೆ,

Crop insurance application Documents : ಬೇಕಾದ ದಾಖಲಾತಿಗಳು:
ಅರ್ಜಿ ನಮೂನೆಯಲ್ಲಿ ಬೆಳೆದಾಖಲಿಸಿ ರೈತರು ಸಹಿ ಮಾಡುವುದು.
ರೈತರ ನೋಂದಣಿ ಸಂಖ್ಯೆ
ರೈತರ ಆಧಾರ ಕಾರ್ಡ
ಬ್ಯಾಂಕ್ ಪಾಸ ಬುಕ್
ಪಹಣಿ (RTC)
ಜಂಟಿ ಖಾತೆಗೆ ಒಪ್ಪಿಗೆ ಪತ್ರ
ವಿಶೇಷ ಸೂಚನೆ:

ಇದನ್ನೂ ಓದಿ: PM Kisan ಮುಂದಿನ ಕಂತಿನ ಹಣ ಬರಬೇಕೇ ತಪ್ಪದೇ ಈ ಕೆಲಸ ಇಂದೇ ಮಾಡಿ!!!

Last date of Crop insurance: ಕೊನೆಯ ದಿನಾಂಕ: ಯಾವ ಬೆಳೆಗೆ ಎಷ್ಟು ಬೆಳೆ ವಿಮೆ ಪ್ರೀಮಿಯಂ ?

ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯನ್ನು (fasal Bima Yojana) ರೈತರ ಅನಿಶ್ಚಿತ ಕೃಷಿಯಲ್ಲಿ ಆದಾಯ ತರುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ಜಿಲ್ಲೆಗೂ ಸರ್ಕಾರಗಳು ನಿಗಧಿ ಪಡಿಸಿದ ಇನಶ್ಯೂರೆನ್ಸ್ ಕಂಪನಿ ಸಹಯೋಗದೊಂದಿಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಮಂಜೂರಾತಿ ನೀಡಲಾಗಿರುತ್ತದೆ.

ಆತ್ಮೀಯ ರೈತ ಸಮೂಹಕ್ಕೆ ಈ ಮೂಲಕ ನಾವು ಈ ಬೆಳೆ ವಿಮೆ bele vime ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯ (fasal Bima Yojana)ಅಡಿಯಲ್ಲಿ ಒಳಪಡುವ ಬೆಳೆ ವಿಮೆ ಬಗ್ಗೆ ಮಾಹಿತಿ ತಿಳಿಯುವುದು ಉತ್ತಮ.

ಅದಕ್ಕೂ ಮೊದಲು ವಿಮೆ ಕಟ್ಟುವ ರೈತರಿಗೆ ಬೆಳೆ ವಿಮೆ ಅಂದರೆ ಏನು ಅದು ಹೇಗೆ ಪರಿಹಾರ ದೊರೆಯುತ್ತದೆ. ಅಂತ ಮಾಹಿತಿ ತಿಳಿಯಿರಿ.
ರೈತ ಬಾಂದವರೇ ನಾವು ಪ್ರತಿ ವರ್ಷ ಬೆಳೆ ವಿಮ ಕಟ್ಟುತ್ತೆವೆ ಆದರೆ ನಮಗೆ ಬೆಳೆ ವಿಮೆ ಪರಿಹಾರ ಬರುವುದೇ ಇಲ್ಲವೆಂದು ರೈತರ ಬೇಸರ ವ್ಯಕ್ತಪಡಿಸುತ್ತಿರುವುದು ವಾಸ್ತವ. ಆದರೆ ಬೆಳೆ ವಿಮೆ ಅಧಿಸೂಚಿತ ಘಟಕ ಅಂದರೆ ಒಂದು ಗ್ರಾಮ ಪಂಚಾಯಿತಿಗೆ ಒಂದು ಅಧಿಸೂಚಿತ ಘಟಕ ಎಂದು ಕರೆಯುತ್ತಾರೆ.ಆ ಒಂದು ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಅತೀ ಕಡಿಮೆ ಮತ್ತು ಅತೀ ಹೆಚ್ಚು ಆದಾಗ ಮತ್ತು ಶೇ 75 ಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ಒಟ್ಟು ಬೆಳೆ ವಿಮೆ ಮೊತ್ತದ ಗರಿಷ್ಠ 25% ರಷ್ಟು ಪರಿಹಾರ ವಿಮಾ ಸಂಸ್ಥೆಯ ವಿಮೆ ಮಾಡಸಿದ ರೈತರಿಗೆ ನೀಡಬೇಕಾಗಿರುತ್ತದೆ.

ಇದನ್ನೂ ಓದಿ:2025-26 ನೇ ಮುಂಗಾರು ಹಂಗಾಮಿನ ಬೆಳೆ ಸಮಿಕ್ಷೇ ಬಗ್ಗೆ ಮಾಹಿತಿ

ಹಾಗೂ ರೈತರೂ ತಮ್ಮ ಜಮೀನುಗಳಲ್ಲಿ ಬೆಳೆ ಕಟಾವು ಮಾಡಿದ ನಂತರ ಗದ್ದೆಯಲ್ಲಿ ಒಣಗಲು ಬಿಟ್ಟಾಗ ಎರಡು ವಾರದ ಒಳಗಾಗಿ ಅಕಾಲಿಕ ಮಳೆ, ಚಂಡಮಾರುತದಿಂದ ಅಥವಾ ಪ್ರಕೃತಿ ವಿಕೋಪದಂತಹ ಪರಿಸ್ಥಿತಿಗಳಿಗೆ ಸಿಲುಕಿ ನಷ್ಟವಾದ ಸಂದರ್ಭದಲ್ಲಿ 48 ಗಂಟೆಯೊಳಗೆ ವಿಮೆ ಸಂಸ್ಥೆ ಮಾಹಿತಿ ನೀಡಿದ್ದಲ್ಲಿ ಅಥವಾ ಹತ್ತಿರದ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಿಗೆ ಅರ್ಜಿ ಸಲ್ಲಿಸಿದ ನಂತರ ರೈತರ ಸಂಪೂರ್ಣ ನಷ್ಟ ಲೆಕ್ಕಾಚಾರ ಮಾಡಿ ಸರ್ಕಾರ ಮಾರ್ಗಸೂಚಿ ಅನುಗುಣವಾಗಿ ವಿಮಾ ಸಂಸ್ಥೆಯಿಂದ ರೈತರಿಗೆ ಬೆಳೆ ವಿಮೆ ಪಾವತಿಸಲು ಅವಕಾಶವಿರುತ್ತದೆ.

ಇನ್ನೊಂದು ಪ್ರಕಾರದ ವಿಮೆ ದೊರೆಯುವುದು ಅದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೃಷಿ ಮತ್ತು ಕೃಷಿಯೇತರ ಇಲಾಖೆ ಅಧಿಕಾರಿಗಳು ಮತ್ತು ವಿಮಾ ಸಂಸ್ಥೆಯ ಪ್ರತಿನಿಧಿ ಸಹಯೋಗದಲ್ಲಿ ನಾಲ್ಕು ಕಡೆ Crop cutting Experiment ಬೆಳೆ ಅಂದಾಜು ಸಮೀಕ್ಷೆ ಮಾಡಲಾಗುತ್ತದೆ. ಈ ನಾಲ್ಕು ಸಮೀಕ್ಷೆಯಲ್ಲಿ ಅಧಿಸೂಚಿತ ಬೆಳೆ ವಿಮೆ 5*5 ಮೀಟರ್‍ ಅಳತೆಯಲ್ಲಿ ಬೆಳೆಯನ್ನು ಕಟಾವು ಮಾಡುವುದರ ಮೂಲಕ ಇಳುವರಿಯನ್ನು ಲೆಕ್ಕಚಾರ ಮಾಡಿ. ಅಂತಿಮವಾಗಿ ಸರಾಸರಿ ಇಳುವರಿ ಕಡಿಮೆ ಬಂದಲ್ಲಿ ಆ ಒಂದು ಗ್ರಾಮ ಪಂಚಾಯಿತಿ ಒಳಪಡುವ ಅಥವಾ ಅಧಿಸೂಚಿತ ಘಟಕದಡಿ ಬರುವ ರೈತರಿಗೆ ಬೆಳೆ ವಿಮೆಯನ್ನು ಸಂಬಂದ ಪಟ್ಟ ವಿಮಾ ಕಂಪನಿಗಳು ಪಾವತಿಸಲು ಅವಕಾಶ ಇರುವುದು.

Last Year Application Status :ಕಳೆದ ವರ್ಷದ ಅರ್ಜಿ ಸ್ಥಿತಿ ಪರೀಕ್ಷೀಸಿಕೊಳ್ಳಿ:
ಬೆಳೆ ವಿಮೆ ಅರ್ಜಿ ಚೆಕ್ ಮಾಡುವ ಲಿಂಕ್ : Bele Vime Status Check link: ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಸಂಕರಕ್ಷಣೆ ಪೋರ್ಟಲ್ ತೆರೆದ ಮೇಲೆ ಅರ್ಜಿದಾರರ ಆಧಾರ್‍ ನಂಬರ ಅಥವಾ ಮೊಬೈಲ್ ನಂಬರ್‍ ಹಾಕಿ ಬೆಳೆ ವಿಮೆ ಅರ್ಜಿಯ ಹಂತ ವೀಕ್ಷೀಸಬಹುದು.

ವಿಶೇಷ ಸೂಚನೆ: ರೈತ ಬಾಂದವರು ನೇರವಾಗಿ CSC or ಸಂಬಂಧ ಪಟ್ಟ ಕಚೇರಿಗಳಿಗೆ ತೆರಳಿ ಬೆಳೆವಿಮೆ ಅರ್ಜಿ ನೋಂದಾಹಿಸಿಕೊಳ್ಳಿ.

ಇತ್ತೀಚಿನ ಸುದ್ದಿಗಳು

Related Articles