Wednesday, February 5, 2025

Agriculture sprinkler subsidy-ಕೃಷಿ ಇಲಾಖೆಯಲ್ಲಿ ಶೇ.90% ಸಹಾಯಧನದಲ್ಲಿ ಸ್ಪಿಂಕ್ಲರ್  ಸೆಟ್ ವಿತರಣೆಗೆ ಅರ್ಜಿ ಆಹ್ವಾನ!

ನಮಸ್ಕಾರ ರೈತರೇ, ಕೃಷಿ ಇಲಾಖೆಯಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಸೂಕ್ಮ ನೀರಾವರಿ ಯೋಜನೆಯಡಿ ಎಲ್ಲಾ ವರ್ಗದ ರೈತರಿಗೆ ಅಂದರೆ ಸಾಮಾನ್ಯ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ಎಲ್ಲರಿಗೂ ಶೇ.90% ಸಹಾಯಧನದಲ್ಲಿ ಸ್ಪಿಂಕ್ಲರ್ ಪೈಪ್ ಗಳನ್ನು ವಿತರಣೆ ಮಾಡಲಾಗುತ್ತಿದೆ.

ಕರ್ನಾಟಕ ರಾಜ್ಯ ಕೃಷಿ ಇಲಾಖೆಯಿಂದ ಸೂಕ್ಮ ನೀರಾವರಿ ಯೋಜನೆಯಡಿ ಶೇ.90% ಸಹಾಯಧನದಲ್ಲಿ ಸ್ಪಿಂಕ್ಲರ್ ಸೆಟ್ ಪಡೆಯಲು ಹಲವು ಜಿಲ್ಲೆಗಳಲ್ಲಿ ರೈತರಿಂದ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಹ ರೈತರು ಈ ಸೌಲಭ್ಯವನ್ನು ಪಡೆದುಕೊಳ್ಳಲು ಏನು ಮಾಡಬೇಕು ಮತ್ತು ಯಾವೆಲ್ಲ ದಾಖಲೆಗಳನ್ನು ಕೊಡಬೇಕು ಎಂದು ಈ ಲೇಖನದಲ್ಲಿ ನೀಡಲಾಗಿದೆ.

ಹೌದು ರೈತರೇ, ಕೃಷಿ ಇಲಾಖೆವತಿಯಿಂದ ರಾಜ್ಯದ ಎಲ್ಲಾ ಕೃಷಿ ಇಲಾಖೆಗಳಲ್ಲಿ ರೈತರಿಗೆ ತುಂತುರು ನೀರಾವರಿ ಅಳವಡಿಕೆ ಮಾಡಿಕೊಳ್ಳಲು ಶೇ.90% ಸಹಾಯಧನದಲ್ಲಿ ಸ್ಪಿಂಕ್ಲರ್ ಸೆಟ್ ವಿತರಣೆ ಮಾಡಲಾಗುತ್ತಿದೆ. ಆಸಕ್ತ ರೈತರು ಈ ಸೌಲಭ್ಯಕ್ಕೆ ಅರ್ಜಿಗಳನ್ನು ಸಲ್ಲಿಸಬಹುದು.

ಕರ್ನಾಟಕ ರಾಜ್ಯವು ಕೃಷಿ ಪ್ರಧಾನವಾದ ರಾಜ್ಯವಾದರಿಂದ ಬಹುತೇಕ ಜಿಲ್ಲೆಗಳು ಕಡಿಮೆ ಮಳೆ ಪಡೆಯುದರಿಂದ ಅಲ್ಲಿಯ ಕಡಿಮೆ ನೀರನ್ನು ಒಂದು ವ್ಯವಸ್ಥಿತವಾಗಿ ಬೆಳೆಗಳಿಗೆ ಅಗತ್ಯಕ್ಕೆ ಅನುಗುಣವಾಗಿ ಬಳಕೆ ಮಾಡಲು ರೈತರಿಗೆ ಸಹಾಯವಾಗಲು ಕೃಷಿ ಇಲಾಯೆಯು ಶೇ.90% ಸಹಾಯಧನದಲ್ಲಿ 30 ಪೈಪು ಮತ್ತು 5 ಸ್ಪಿಂಕ್ಲರ್ ಜೆಟ್ ವಿತರಣೆ ಮಾಡಲಾಗುತ್ತಿದೆ.

ಸ್ಪಿಂಕ್ಲರ್ ಸೆಟ್ ಗೆ ಎಲ್ಲಿ ಅರ್ಜಿ ಸಲ್ಲಿಸಬೇಕು?

ಕೃಷಿ ಇಲಾಖೆಯ ಸ್ಪಿಂಕ್ಲರ್ ಪೈಪ್ ಪಡೆಯಲು ನಿಮ್ಮ ಜಿಲ್ಲೆಗಳಲ್ಲಿರುವ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಅಥವಾ ಹೋಬಳಿ ಮಟ್ಟದಲ್ಲಿರುವ ರೈತ ಸಂಪರ್ಕ ಕೇಂದ್ರ (ಕೃಷಿ ಇಲಾಖೆ) ಕಛೇರಿಗಳಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.

ಇದಕ್ಕೆ ಯಾರು ಎಲ್ಲಾ ಅರ್ಜಿ ಸಲ್ಲಿಸಬಹುದು.

1)1ಹೆಕ್ಟರ್ ಮೇಲ್ಪಟ್ಟು ಜಮೀನು ಇರಬೇಕು(ಇದು ಸ್ಥಳಿಯ ವಾತಾವರಣದ ಮೇಲೆ ವ್ಯತ್ಯಾಸ ಇರುತ್ತದೆ)

2)ಈ ಹಿಂದೆ ಈ ಸೌಲಭ್ಯ ಪಡೆದುಕೊಂಡಿರಬಾರದು.

3)ಒಮ್ಮೆ ಪಡೆದುಕೊಂಡರೆ 7 ವರ್ಷಗಳ ವರೆಗೆ ಮರಳಿ ಪಡೆಯಲು ಬರುವುದಿಲ್ಲ

4)ಎಲ್ಲಾ ವರ್ಗದವರು ಇದಕ್ಕೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.

1)ಕೃಷಿ ಇಲಾಖೆ ಅರ್ಜಿ ನಮೂನೆ

2)ಪಹಣಿ/ ಆರ್ ಟಿ ಸಿ

3)ಆಧಾರ್ ಪ್ರತಿ.

4)ಬ್ಯಾಂಕ್ ಪಾಸಬುಕ್ ಪ್ರತಿ

5)ರೇಷನ್ ಕಾರ್ಡ್ ಪ್ರತಿ

6)1 ಫೋಟೋ

7)sc/st ಆಗಿದ್ದಲ್ಲಿ ಜಾತಿ ಪ್ರಮಾಣ ಪತ್ರ

8)rtc/ ಪಹಣಿ ಜಂಟಿ ಇದ್ದಲ್ಲಿ ಉಳಿದವರ ಒಪ್ಪಿಗೆ ಪತ್ರ

9) ಇಲಾಖೆ ಅಧಿಕಾರಿಗಳು ತಿಳಿಸುವ ಇತರೆ ದಾಖಲೆಗಳು

ಸೂಚನೆ: ಇನ್ನೂ ಹೆಚ್ಚಿನ ಮಾಹಿತಿಗೆ ಹತ್ತಿರದ ಕೃಷಿ ಇಲಾಖೆಗೆ ಭೇಟಿ ಮಾಡಿ ಮಾಹಿತಿ ಪಡೆಯಬಹುದು.

ಇತ್ತೀಚಿನ ಸುದ್ದಿಗಳು

Related Articles