Thursday, September 19, 2024

PM Kisan AMOUNT-ಈ ಪಟ್ಟಿಯಲ್ಲಿರುವ ರೈತರಿಗೆ ಮಾತ್ರ ಪಿ ಎಮ್ ಕಿಸಾನ್ ಯೋಜನೆಯ 18ನೇ ಕಂತು ಸಿಗಲಿದೆ! ನಿಮ್ಮ ಹೆಸರು ಪಟ್ಟಿಯಲ್ಲಿ ಉಂಟೇ ಚೆಕ್ ಮಾಡಿಕೊಳ್ಳಿ.

ನಮಸ್ಕಾರ ರೈತ ಭಾಂದವರೇ, ಕೇಂದ್ರ ಸರಕಾರದಿಂದ ರೈತರಿಗೆ ಸಿಗುವ ಪಿ ಎಂ ಕಿಸಾನ್ ಸಮ್ಮಾನ ನಿಧಿ ಯೋಜನೆಯ ಈ ಯೋಜನೆಯಡಿ ಈಗಾಗಲೇ 17 ಕಂತುಗಳು ರೈತರಿಗೆ ಜಮೆ ಮಾಡಲಾಗಿದೆ. 18 ನೇ ಕಂತು ಬಿಡುಗಡೆ ಮಾಡಲು ಕೇಂದ್ರ ಸರಕಾರವು ತಯಾರಿಯಲ್ಲಿದೆ.

ಆದ್ದರಿಂದ ಎಲ್ಲಾ ರೈತರು ತಪ್ಪದೇ ಕೇಂದ್ರ ಸರಕಾರದಿಂದ ಸಿಗುವ ಪಿ ಎಂ ಕಿಸಾನ್ ಸಮ್ಮಾನ ನಿಧಿ ಯೋಜನೆಯ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರು ಉಂಟೇ ಎಂದು ಹೇಗೆ ತಿಳಿದು ಕೊಳ್ಳಬೇಕು ಮತ್ತು ಅದನ್ನು ನೋಡುವುದು ಹೇಗೆ ಎಂದು ನಾವು ನಿಮಗೆ ತಿಳಿಸಿಕೊಡಲಾಗುತ್ತದೆ.

ಕೇಂದ್ರ ಸರಕಾರವು ರೈತರಿಗೆ ಕಷ್ಟದ ಸಮಯದಲ್ಲಿ ಅನುಕೂಲವಾಗಲೆಂದು ವರ್ಷಕ್ಕೆ ರೂ,6000 ಸಾವಿರವನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೂ.2000 ಸಾವಿರ ಹಣವನ್ನು ನೇರ ರೈತರ ಖಾತೆಗೆ ಜಮೆ ಮಾಡುತ್ತಿದೆ. ಇದರಿಂದ ರೈತರಿಗೆ ಬೇಕಾಗುವ ಬೀಜ, ಗೊಬ್ಬರ, ಇನ್ನಿತರ ಕೃಷಿ ಸಲಕರಣೆಗಳ ಖರೀದಿಗೆ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ:ಸ್ವಯಂ ಉದ್ಯೋಗ ಮಾಡಲು ರೂ.50,000 ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

PM kisan beneficiary list-ಪಿ ಎಂ ಕಿಸಾನ್ ಪಟ್ಟಿಯಲ್ಲಿ ನಿಮ್ಮ ಹೆಸರು ಉಂಟೇ ಚೆಕ್ ಮಾಡಿಕೊಳ್ಳಿ?

ರೈತರಿಗೆ ಪಿ ಎಂ ಕಿಸಾನ ಯೋಜನೆಯ ಹಣವು ಈ ಲಿಸ್ಟ್ ನಲ್ಲಿರುವ ರೈತರಿಗೆ ಮಾತ್ರ ಸಿಗಲಿದೆ! ನಿಮ್ಮ ಹೆಸರು ಉಂಟೆ? ಚೆಕ್ ಮಾಡಿಕೊಳ್ಳಿ.

ಮೊದಲು  ಪಿಎಮ್ ಕಿಸಾನ್ ಸಮ್ಮಾನ ನಿಧಿ(PM Kisan samman) ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ಕೇಂದ್ರ ಸರಕಾರದ ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಪೋರ್ಟಲ್ ತೆರದುಕೊಳ್ಳುತ್ತದೆ.

Step-1: ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಪೋರ್ಟಲ್ ತೆರದುಕೊಳ್ಳುತ್ತದೆ. ಆಗ Farmers Corner ನಲ್ಲಿ ಹಲವಾರು ಅಂಕಣಗಳಿವೆ E-kyc ಅಂಕಣ, New farmer registration ಅಂಕಣ, Know your status ಅಂಕಣ, Beneficiary list ಅಂಕಣ, Name correction as per Aadhar ಅಂಕಣ ಹೀಗೆ ಹಲವಾರು ಅಂಕಣಗಳು ನಿಮಗೆ ಕಾಣಿಸುತ್ತದೆ.

Step-2: ನಂತರ ಈ ಎಲ್ಲಾ ಅಂಕಣಗಳಲ್ಲಿ ನೀವು Beneficiary list  ಮೇಲೆ ಕ್ಲಿಕ್ ಮಾಡಬೇಕು.

Step-3: ತದನಂತರ ನಿಮ್ಮ ರಾಜ್ಯ ಆಯ್ಕೆ ಮಾಡಿ, ಜಿಲ್ಲೆ ಆಯ್ಕೆ ಮಾಡಿ, ಉಪ ಜಿಲ್ಲೆ ಆಯ್ಕೆ ಮಾಡಿ, ತಾಲೂಕು ಆಯ್ಕೆ ಮಾಡಿ, ಕೊನೆಯಲ್ಲಿ ನಿಮ್ಮ ಗ್ರಾಮ/ಹಳ್ಳಿ ಆಯ್ಕೆ ಮಾಡಿ.

Step-4:ನಂತರ Get report ಮೇಲೆ ಕ್ಲಿಕ್ ಮಾಡಿ ಆಗ ನಿಮಗೆ ನಿಮ್ಮ ಗ್ರಾಮದಲ್ಲಿ ಇರುವ ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿ ಬರುತ್ತದೆ. ಅದರಲ್ಲಿ ನಿಮ್ಮ ಹೆಸರು ಹುಡುಕಿಕೊಳ್ಳಿ. 

ಇದನ್ನೂ ಓದಿ:ಪಶು ಪಾಲನಾ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳು! ಮತ್ತು ಪಶು ವೈದ್ಯಾಧಿಕಾರಿಗಳ ಸಂಪರ್ಕ ಸಂಬರ್!

ನಿಮ್ಮ ಹೆಸರು ಆ ಲಿಸ್ಟ್ ನಲ್ಲಿ ಕಾಣದಿದ್ದರೇ ನೀವು ನಿಮ್ಮ ಹತ್ತಿರದ ಕೃಷಿ ಇಲಾಖೆಯನ್ನು ಭೇಟಿ ಮಾಡಿ ಪಿಎಂ ಕಿಸಾನ್ ಸಮ್ಮಾನ ನಿಧಿ ಅರ್ಜಿ ಏನಾಗಿದೆ ಎಂದು ತಿಳಿದುಕೊಳ್ಳಿ. ಕೆಲವು ಬಾರಿ Ekyc ಮತ್ತು Aadhar name ತಿದ್ದುಪಡಿ, RTC/ಪಹಣಿ ತಿದ್ದುಪಡಿ, ಹೀಗೆ ಹಲವಾರು ಕಾರಣಗಳಿಂದ ಹಣ ಬರದೆ ಇರಲು ಸಾಧ್ಯತೆಗಳಿವೆ.

ಇತ್ತೀಚಿನ ಸುದ್ದಿಗಳು

Related Articles