Thursday, September 19, 2024

PM Kisan Scheme 2024: PM kisan ಹೊಸದಾಗಿ ಅರ್ಜಿ ಸಲ್ಲಿಸಲು ಮಾನದಂಡಗಳೇನು??? ಕೇಂದ್ರ ಸರ್ಕಾರದ ವಾರ್ಷಿಕ 6000/-ರೂ ಪಡೆಯಲು ಅರ್ಹತೆ ಮತ್ತು ಅನರ್ಹತೆಗಳೇನು?

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ತಿಳಿದಿರುವ ಹಾಗೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi Scheme) ಯೋಜನೆಯಡಿ ರೈತಾಪಿ ವರ್ಗಕ್ಕೆ ವಾರ್ಷಿಕ 6000 ಸಾವಿರ ರೂಪಾಯಿಗಳ ಸಹಾಯಧನವನ್ನು 4 ತಿಂಗಳಿಗೆ ಒಮ್ಮೆ ಎರಡೂ ಸಾವಿರದಂತೆ ಕೃಷಿ ಚಟುವಟಿಕೆಗಳಿಗೆ ಸಹಾಯವಾಗಲೆಂದು ಕೇಂದ್ರ ಸರ್ಕಾರ ಈ ಸಹಾಯಧನವನ್ನು ಒದಗಿಸುತ್ತಿದೆ. ಈಗಾಗಲೇ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan) ಯೋಜನೆಯಡಿ 16 ಕಂತುಗಳು ರೈತರ ಖಾತೆಗಳಿಗೆ ನೇರವಾಗಿ ವರ್ಗಾವಣೆ (DBT)ಮಾಡಿರುತ್ತದೆ.

ಹೌದು ಈ ಯೋಜನೆ 2019 ನೇ ಎಪ್ರಿಲ್ ತಿಂಗಳಿನಲ್ಲಿ ಜಾರಿಗೆ ಬಂದಿರುತ್ತದೆ, ಮುಂದುವರೆದು 2019 ರ ನಂತರ ಪಹಣಿ ಬದಲಾವಣೆ ಆಗಿರುವ ರೈತರು ಯೋಜನೆ ಲಾಭ ಪಡೆಯಬೇಕಾದರೆ , ರೈತರ ದಾಖಲೆಗಳು ಯಾವ ರೀತಿ ಇರಬೇಕು ? ಪಹಣಿ ಯಾವ ರೀತಿ ಮಾರ್ಪಟ್ಟಿರಬೇಕು? ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ವಿವರಿಸಲಾಗಿದೆ.

PM Kisan Scheme: ಹೊಸದಾಗಿ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
1)ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan) ಯೋಜನೆಯಡಿ ಹೊಸದಾಗಿ ಅರ್ಜಿ ಸಲ್ಲಿಸಲು ಮುಖ್ಯವಾಗಿ ರೈತರಾಗಿರಬೇಕು ಜಮೀನು ಹೊಂದಿರಬೇಕು.
2)ನಿಮ್ಮ ಜಮೀನಿನ ಎಲ್ಲಾ ಸರ್ವೆ ನಂಬರ್‍ ಗಳನ್ನು ಕೃಷಿ ಇಲಾಖೆಯ Fruits ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಂಡಿರಬೇಕು.


3)ಪ್ರತಿ ಒಬ್ಬ ರೈತರಿಗೂ ರೈತರ ನೋಂದಣಿ ಸಂಖ್ಯೆ (FID Number) ಹೊಂದಿರಬೇಕು.
4)ಮುಖ್ಯವಾಗಿ ಪಹಣಿಯಲ್ಲಿ ಕಾಲಂ ನಂಬರ್‍ 10 ರಲ್ಲಿ ಕಬ್ಜೆ ಅಥವಾ ಸ್ವಾಧಿನತೆಯ ರೀತಿ “ಪೌತಿ” ಅಂತ ಇದ್ದರೆ ಆ ರೈತರಿಗೆ ಅವಕಾಶವಿರುತ್ತದೆ. ( ಇದು 01/02/2019 ರ ನಂತರ (ಜಮೀನು/ಕೃಷಿ ಜಾಗ/ಗದ್ದೆ) ಹೊಸದಾಗಿ ಅರ್ಜಿ ಸಲ್ಲಿಸುವ ಫಲಾನುಭವಿಗಳಿಗೆ ಮಾತ್ರ ಅನ್ವಯವಾಗುತ್ತದೆ)

ಇದನ್ನೂ ಓದಿ: First installment drought payment message: ಮೊದಲ ಕಂತಿನ ಬೆಳೆಹಾನಿ ಪರಿಹಾರ ಸಂದೇಶ ಬಂದರೂ ಹಣ ಜಮಾ ಆಗಿರದಿದ್ದರೇ ತಕ್ಷಣ ಈ ಕೆಲಸ ಮಾಡಿ!!

PM Kisan Scheme 2024: ಹೊಸದಾಗಿ ಯೋಜನೆ ಅರ್ಜಿ ಸಲ್ಲಿಸಲು ಯಾರು ಅನರ್ಹರು:

1.ಒಂದು ವೇಳೆ ರೈತರು 01/02/2019 ರ ನಂತರ ಜಮೀನು/ಕೃಷಿ ಜಾಗ/ಗದ್ದೆ , ಕ್ರಯ (ತೆಗೆದುಕೊಂಡಿದ್ದರೆ) ಮಾಡಿಕೊಂಡಿದ್ದರೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.


2.ಒಂದು ವೇಳೆ ರೈತರು 01/02/2019 ರ ನಂತರ ಜಮೀನು/ಕೃಷಿ ಜಾಗ/ಗದ್ದೆಯನ್ನು ವಿಭಾಗ, ದಾನ, ಕೊರ್ಟ ಆದೇಶ , ಭೂ ಪರಿವರ್ತನೆ , ಮಾರಾಟ ಮಾಡಿಕೊಂಡಿದ್ದರೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.


3.ಸರ್ಕಾರಿ ಉದ್ಯೋಗ ಹೊಂದಿರುವವರು ಅನರ್ಹರು.
ಒಂದು ವೇಳೆ ರೈತರು ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರೆ, ಈ ಯೋಜನೆ ಅನರ್ಹರಾಗಿರುತ್ತಾರೆ.

ಮುಂದುವರೆದು ..ಕೆಲವೊಂದಿಷ್ಟು ರೈತರಿಗೆ ಈ ಹಿಂದೆ ಬರುತ್ತಿದ್ದ ಹಣ ಈಗ ಬರುತ್ತಿಲ್ಲ, ಹಾಗಾದರೆ ಅದಕ್ಕೆ ಕಾರಣ ಏನು ಎಂಬುದನ್ನು ಆನ್ನೈನ್ ಮೂಲಕ ಹೇಗೆ ಚೆಕ್ ಮಾಡುವುದು ಎಂದು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.

ಹಂತ:1: ಮೊದಲು ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಅಥವಾ Chrome app ನಲ್ಲಿ PMKISAN FRUITS ಅಂತ ಸರ್ಚ್ ಬಾರ್‍ ನಲ್ಲಿ ಟೈಪ್ ಮಾಡಿ.
https://fruitspmk.karnataka.gov.in/

ಹಂತ: 2 :ಆಗ ಬರುವಂತಹ ಆಯ್ಕೆಗಳಲ್ಲಿ GET DETAILS BY AADHAR ಆಯ್ಕೆಯನ್ನು ಆಯ್ಕೆ ಮಾಡಿ. ಅದರ ಮೇಲೆ ಓತ್ತಿ . https://fruitspmk.karnataka.gov.in/MIS Report/GetDetailsByAadhaar.aspx

ಹಂತ: 3: ಇಲ್ಲಿ ನಿಮ್ಮ 12 ಸಂಖ್ಯೆ ಆಧಾರ ನಂಬರ್‍ ಹಾಕಿ ಅಲ್ಲಿ ದೊರೆಯುವ PMK ID ಪಡೆದುಕೊಂಡು ಅಥವಾ ಕಾಪಿ ಮಾಡಿಕೊಂಡು ಮತ್ತೆ ಮರಳಿ ನೀವು ಪಿಎಂ ಕಿಸಾನ್ ಫೂಟ್ಸ್ ಯೋಜನೆಯ ಹೋಂ ಪೇಜ್ ಗೆ ಹೋಗಬೇಕು.

ಹಂತ: 4: ಆ ಒಂದು ಪೇಜ್ ನಲ್ಲಿ ಕಾಣುವಂತಹ ಸ್ಥಿತಿ ಪರಿಶೀಲಿಸಿ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕಾಫಿ ಮಾಡಿರುವ PMKID number ನಮೂದಿಸುವ ಮೂಲಕ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan) ಯೋಜನೆಯಡಿ ಹಣ ಯಾವ ಕಾರಣಗಳಿಂದಾಗಿ ನಿಂತಿದೆ ಎಂಬುದನ್ನು ಆನ್ನೈನ್ ಮೂಲಕ ನೋಡಬಹುದಾಗಿರುತ್ತದೆ. https://fruitspmk.karnataka.gov.in/.

ಇದನ್ನೂ ಓದಿ: Agriculture Department machinery: ಯಾವ ಉಪಕರಣಕ್ಕೆ ಯಾವ ದಾಖಲೆಗಳು ಬೇಕು:

ಕೇಂದ್ರ ಸರಕಾರದ ಹಣ ಪಾವತಿ ಬಗ್ಗೆ ತಿಳಿಯುವ ವಿಧಾನ:
ಹಂತ: 1: ರೈತರು ತಮ್ಮ ಮೊಬೈಲ್ ನಲ್ಲಿ ಕ್ರೋಮ್ ಬ್ರೌಸರ್ ಓಪನ್ ಮಾಡಬೇಕು ಅದರಲ್ಲಿ www.pmkisan.gov.in ವೆಬ್ಸೈಟ್ ಓಪನ್ ಮಾಡಿದಾಗ pmkisan.gov.in/beneficiary Status ಅನ್ನು ಆಯ್ಕೆ ಮಾಡಬೇಕಾಗುತ್ತದೆ.

ಹಂತ: 2:ನಂತರ ನಿಮ್ಮ ರಿಜಿಸ್ಟ್ರೇಷನ್ ನಂಬರ್ (KA123XXX ) ಇರುವ ನಂಬರ್‍ ನಮೂದಿಸಬೇಕಾಗಿರುತ್ತದೆ. ನಂತರ ಅಲ್ಲಿ ಕಾಣಿಸುವ ಕ್ಯಾಪ್ಚರ್ ನಮೂದಿಸಬೇಕು. ನಂತರ benificiary status ಓಪನ್ ಆಗುತ್ತದೆ.

ಹಂತ: 3:ನಿಮ್ಮ ಆಧಾರ್‍ ಲಿಂಕ್ ಆಗಿರುವ ಮೊಬೈಲ್ ನಂಬರ್‍ ಗೆ OTP ಸಂಖ್ಯೆ ಬರುತ್ತದೆ. ಆ ಸಂಖ್ಯೆ ನಮೂದಿಸಿದಾಗ PM Kisan Scheme ಹಣ ಯಾವ ಖಾತೆಗೆ ಬರುತ್ತದೆ, ಎಷ್ಟು ಕಂತು ಬಂದಿರುತ್ತದೆ, ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿ ದೊರೆವುದು,

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan) ಯೋಜನೆಯಡಿ ಹಣ ರದ್ದಾಗಲು ಕಾರಣಗಳು:

Ineligible Reasons: ಅನರ್ಹ ಫಲಾನುಭವಿಗಳ ಕಾರಣಗಳು:
*.ಈ ಅಂಕಣದಲ್ಲಿ Ineligible After Bhoomi verification ಅಂತ ಇರುತ್ತದೆ.
*.1/02/2019 ರ ನಂತರ ಭೂ ಸ್ವಾಧೀನ(ಕ್ರಯ, ದಾನ,ವಿಭಾಗ, ವಿಭಜನೆ, ಭೂ ಪರಿವರ್ತನೆ ಈ ಕಾರಣ ಇರಬಹುದು)
*.Income Tax Pay ಕಾರಣ ಇರಬಹುದು.
*.Eligibility : no ಅಂತ ನಮುದಾಗಿರುತ್ತದೆ.
*.Adhar Demo Authentication Status: no ಅಂತ ನಮುದಾಗಿರುತ್ತದೆ.


*.PFMS / Bank status:
1.Account details is under revalition process with bank
2.Farmer Record has been rejected by PFMS / BANK
3.NPCI issue is not active
4.Land Seeding – No
5.Ekyc – No
ಈ ಮೇಲೆ ಕಾಣಿಸಿದ ಸೂಚನೆಗಳು ಕಂಡು ಬಂದರೆ ಆ ಫಲಾನುಭವಿಗಳು ಈ ಯೋಜನೆಗೆ ಅನರ್ಹರಾಗಿದ್ದಾರೆ ಎಂಬುದು ತೋರಿಸುತ್ತದೆ.

PM kisan Eligible Farmers: ಯೋಜನೆಯ ಅರ್ಹರಾಗಿದ್ದರೆ ಯಾವ ರೀತಿ ಗೋಚರಿಸುತ್ತದೆ:
Eligibility ಅಂಕಣದಲ್ಲಿ
1)Adhar Demo Authentication Status,PFMS/Status,Land seeding, ekyc demo ಈ ಎಲ್ಲಾ ಅಂಕಣದಲ್ಲಿ yes ಅಂತ ಇದ್ದರೆ ನೀವು ಈ ಯೋಜನೆಗೆ ಅರ್ಹರಾಗಿರುತ್ತೀರಿ
2)ಹಾಗೂ ಹಣ ಬಂದಿರುವ ಮಾಹಿತಿ ತೋರಿಸಿದರು ನೀವು ಈ ಯೋಜನೆಗೆ ಅರ್ಹರು.

ಇದನ್ನೂ ಓದಿ: Mgnreg Scheme-2024: ವೈಯಕ್ತಿಕ ಕಾಮಗಾರಿಗಳು ಮತ್ತು ದೊರೆಯುವ ಅನುದಾನ ವಿವರ:

ಇತ್ತೀಚಿನ ಸುದ್ದಿಗಳು

Related Articles